ಹಳಿ ತಪ್ಪಿದ ಸಾಬರಮತಿ ಎಕ್ಸ್‌ಪ್ರೆಸ್‌ನ 22 ಬೋಗಿಗಳು

  • ಕಾನ್ಪುರ(ಉತ್ತರ ಪ್ರದೇಶ): ಹಳಿ ತಪ್ಪಿದ ಸಾಬರಮತಿ ಎಕ್ಸ್‌ಪ್ರೆಸ್‌ನ 22 ಬೋಗಿಗಳು: ಯಾವುದೇ ಪ್ರಾಣಹಾನಿ ಇಲ್ಲ!

  • ಹಳಿ ಮೇಲೆ ವಸ್ತು ಇಟ್ಟಿದ್ದರಿಂದ ಅವಘಡ !

ಕಾನ್ಪುರ (ಉತ್ತರ ಪ್ರದೇಶ) – ಕಾನ್ಪುರ ಮತ್ತು ಭೀಮನೇನ್ ರೈಲ್ವೆ ನಿಲ್ದಾಣದ ನಡುವೆ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನ 22 ಬೋಗಿಗಳು ಆಗಸ್ಟ್ 16 ರಂದು ಬೆಳಿಗ್ಗೆ 2.30ರ ಸುಮಾರಿಗೆ ಹಳಿತಪ್ಪಿದವು. ಈ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಲೊಕೊ ಪೈಲಟ್ (ರೈಲು ಚಾಲಕ) ನೀಡಿದ ಮಾಹಿತಿ ಪ್ರಕಾರ, ಹಳಿಯ ಮೇಲಿದ್ದ ವಸ್ತುವೊಂದಕ್ಕೆ ಇಂಜಿನ್ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಈ ರೈಲು ವಾರಣಾಸಿ-ಕರ್ಣಾವತಿ ಮಾರ್ಗದಲ್ಲಿ ಚಲಿಸುತ್ತದೆ. ಈ ಅವಘಡದಿಂದಾಗಿ ಈ ಮಾರ್ಗದ 7 ರೈಲುಗಳನ್ನು ರದ್ದುಗೊಳಿಸಲಾಗಿದ್ದು, 3 ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದೆ.

ಸಂಪಾದಕೀಯ ನಿಲುವು

ಈ ಅಪಘಾತದ ಹಿಂದೆ ಷಡ್ಯಂತ್ರ ಇತ್ತೇ? ಎಂಬುದರ ತನಿಖೆಯಾಗಬೇಕು !