Tippu Sultan Posters : ‘ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ ತಿರಂಗ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನಿನ ಫಲಕ !

  • ಪೊಲೀಸರಿಂದ ಮೆರವಣಿಗೆ ತಡೆ !

  • ‘ಟಿಪ್ಪು ಸುಲ್ತಾನ್ ಜಿಂದಾಬಾದ’ದ ಘೋಷಣೆ’ : ಹಿಂದೂಗಳಿಂದ ಆಕ್ರೋಶ !

ಠಾಣೆ, ಆಗಸ್ಟ್ ೧೫ (ವಾರ್ತೆ) – ಮುಂಬ್ರಾದಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ‘ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದಿಂದ ತಿರಂಗ ಮೆರವಣಿಗೆ ನಡೆಸಲಾಗಿತ್ತು. ಇದರಲ್ಲಿ ಮತಾಂಧರು ಟಿಪ್ಪು ಸುಲ್ತಾನಿನ ಛಾಯಾಚಿತ್ರ ಇರುವ ಫಲಕ ಕೈಯಲ್ಲಿ ಹಿಡಿದಿದ್ದರು. ಕೆಲವರು ‘ಟಿಪ್ಪು ಸುಲ್ತಾನ್ ಜಿಂದಾಬಾದ್’ ಘೋಷಣೆ ನೀಡುತ್ತಿದ್ದರು. ಬಿಗುವಿನ ವಾತಾವರಣ ನಿರ್ಮಾಣವಾಗಬಾರದೆಂದು; ಪೊಲೀಸರು ಮೆರವಣಿಗೆ ತಡೆದರು. ಆದ್ದರಿಂದ ಮತಾಂಧರು ಅದನ್ನು ನಿಷೇಧಿಸಿದರು.

‘ಟಿಪ್ಪು ಸುಲ್ತಾನ್ ಜಿಂದಾಬಾದ್’ ಘೋಷಣೆ ನೀಡಿದ್ದರಿಂದ ಹಿಂದುಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಪೊಲೀಸರು ಟಿಪ್ಪು ಸುಲ್ತಾನಿನ ಛಾಯಚಿತ್ರ ಇರುವ ಫಲಕ ತೆಗೆಯಲು ಆದೇಶ ನೀಡಿದ ನಂತರ ಸ್ಥಳೀಯ ಮುಸಲ್ಮಾನ ನಾಯಕರು ಮತ್ತು ಕಾರ್ಯಕರ್ತರು ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು (ಇಂತಹವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುವರು ಅಥವಾ ಅವರ ಎದುರು ಎಂದಿನಂತೆ ಮಂಡಿಯೂರುವರು ? – ಸಂಪಾದಕರು)

ಟಿಪ್ಪುವಿನ ವೈಭವೀಕರಣ ಮಾಡುವವರನ್ನು ಆಯಾ ಸಮಯದಲ್ಲೇ ಮಟ್ಟ ಹಾಕಬೇಕು ! – ಶಾಸಕ ನಿತೇಶ ರಾಣೆ, ಭಾಜಪ

ನಾವು ಟಿಪ್ಪು ಸುಲ್ತಾನನ ಫಲಕ ಹಾಕಿರುವವರನ್ನು ಯೋಗ್ಯ ಸಮಯದಲ್ಲಿ ಮಟ್ಟ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದೇವೆ. ಟಿಪ್ಪು ಸುಲ್ತಾನ್ ಎದುರಿಗೆ ಈ ಜನರನ್ನು ಪಾಠ ಕಲಿಸಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಮುಸಲ್ಮಾನರ ಭಾವನೆಗಳಿಗೆ ನೋವುಂಟು ಮಾಡುತ್ತೀರಿ ಎಂದು ಮಹಾರಾಷ್ಟ್ರದಲ್ಲಿ ಅಫಝಲಖಾನ್ ವಧೆಯ ಫಲಕ ಹಾಕಲು ನಿಷೇಧಿಸಲಾಗಿದೆ; ಆದರೆ ಲಕ್ಷಾಂತರ ಹಿಂದುಗಳನ್ನು ಬಲವಂತವಾಗಿ ಮತಾಂತರ ಮಾಡಿದ, ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡಿದ ಮತ್ತು ಸಾವಿರಾರು ದೇವಸ್ಥಾನಗಳನ್ನು ಧ್ವಂಸಗೊಳಿಸಿರುವ ಹಿಂದೂದ್ವೇಷಿ ಟಿಪ್ಪು ಸುಲ್ತಾನನ ಫಲಕಕ್ಕೆ ಅನುಮತಿ ನೀಡುತ್ತಾರೆ ! ಇದು ೧೦೦ ಕೋಟಿ ಹಿಂದುಗಳಿಗೆ ಲಜ್ಜಾಸ್ಪದ ! ಟಿಪ್ಪು ಸುಲ್ತಾನಿನ ಫಲಕದ ಮೇಲೆ ಮಹಾರಾಷ್ಟ್ರದಲ್ಲಿ ಅಷ್ಟೇ ಅಲ್ಲದೆ, ಸಂಪೂರ್ಣ ದೇಶದಲ್ಲಿ ನಿಷೇಧ ಹೇರಲು ಆಗ್ರಹಿಸಲು ಹಿಂದುಗಳು ಒಗ್ಗಟ್ಟಾಗುವರೇ ?
  • ಮುಂಬ್ರಾದಲ್ಲಿ ಹಿಂದುದ್ವೇಷಿ ಟಿಪ್ಪು ಸುಲ್ತಾನನ ಚಿತ್ರ ಹಾಕಲು ಯಾರ ಬೆಂಬಲ ಇದೆ ? ಇದು ಜನರಿಗೆ ತಿಳಿಯಬೇಕು ! ಹಿಂದುಗಳು ಈಗ ಸಂಘಟಿತರಾಗಿ ಇಂತಹವರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಸರಕಾರದ ಮೇಲೆ ಕಾನೂನು ರೀತಿಯಲ್ಲಿ ಒತ್ತಡ ಹೇರಬೇಕು !
  • ಇದು ಹಿಂದುಗಳನ್ನು ಕೀಳಾಗಿ ಕಾಣುವುದು ಮತ್ತು ದಾಳಿಕೋರರನ್ನು ವೈಭವಿಸುವ ಘಟನೆ ಅಲ್ಲವೇ ? ಇದರಿಂದ ಹಿಂದುಗಳ ವಿರುದ್ಧ ಯಾವುದಾದರು ಷಡ್ಯಂತ್ರ ರೂಪಿಸಲಾಗುತ್ತಿದೆಯೇ ? ಇದನ್ನು ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಎದುರು ತರುವುದು ಆವಶ್ಯಕವಾಗಿದೆ !