ಯೋಗಋಷಿ ರಾಮದೇವ್ ಬಾಬಾ ಅವರ ಕ್ಷಮಾಪಣೆ ಅಂಗೀಕರಿಸಿದ ಸರ್ವೋಚ್ಚ ನ್ಯಾಯಾಲಯ

ಅಲೋಪತಿಯ ಅಪಕೀರ್ತಿ ಮಾಡಿದ ಪ್ರಕರಣದ ಮೊಕದ್ದಮೆ ಮುಕ್ತಾಯ

ನವ ದೆಹಲಿ – ಯೋಗ ಋಷಿ ರಾಮದೇವ್ ಬಾಬಾ, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಈ ಸಂಬಂಧ ಅವರು ಮಾಡಿದ ಕ್ಷಮಾಪಣೆಯನ್ನು ಅಂಗೀಕರಿಸಿದ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿತು. ಇದೇ ಸಂದರ್ಭದಲ್ಲಿ ನ್ಯಾಯಾಲಯವು ಎಚ್ಚರಿಕೆ ನೀಡುವಾಗ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಏನಾದರೂ ಮಾಡಿದರೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡುವುದು ಎಂದು ಹೇಳಿದೆ.

‘ಇಂಡಿಯನ್ ಮೆಡಿಕಲ್ ಅಸೋಸೊಯೇಶನ್’ ಯೋಗಋಷಿ ರಾಮದೇವ ಬಾಬಾ, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದದ ವಿರುದ್ಧ ಕೋವಿಡ್ ನಿರೋಧ ಲಸಿಕೆ ಮತ್ತು ಅಲೋಪತಿಯ ಮಾನಹಾನಿ ಮಾಡಿದ್ದಕ್ಕಾಗಿ ಮೊಕದ್ದಮೆ ಹೂಡಿತ್ತು.