ರಸ್ತೆ ಮಧ್ಯ ಗಾಡಿ ಏಕೆ ನಿಲ್ಲಿಸಿದ್ದು ಎಂದು ಕೇಳಿದ್ದಕ್ಕೆ ಮುಸಲ್ಮಾನರಿಂದ ಹಿಂದೂ ಯುವಕರ ಮೇಲೆ ದಾಳಿ

ಮುಸಲ್ಮಾನರ ಗುಂಪುಗಾರಿಕೆ !

ಕಲಬುರಗಿ – ರಸ್ತೆಯ ಮಧ್ಯಭಾಗದಲ್ಲಿ ಟ್ರಕ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದರಿಂದ ಮೆಹಬೂಬ್, ಸೈಯದ್, ಸಲ್ಮಾನ್, ಮತ್ತು ಶೇಖ್ ಇವರು ಇಬ್ಬರು ಹಿಂದೂ ಯುವಕರು ರಘು ರೆಡ್ಡಿ ಮತ್ತು ರಾಹುಲ ರೆಡ್ಡಿ ಇವರ ಮೇಲೆ ದಾಳಿ ನಡೆಸಿರುವ ಘಟನೆ ನಗರದ ಕೋಡಲ ಕ್ರಾಸ್ ಹತ್ತಿರ ನಡೆದಿದೆ.

೧. ರಘು ರೆಡ್ಡಿ ಮತ್ತು ರಾಹುಲ್ ರೆಡ್ಡಿ ಇವರು ಗ್ಯಾರೇಜ್ ನಡೆಸುತ್ತಾರೆ. ಮೆಹಬೂಬ್ ಪಟೇಲ್ ಇವನು ರಸ್ತೆಯ ಮಧ್ಯದಲ್ಲಿ ಟ್ರಕ್ ನಿಲ್ಲಿಸಿದ್ದನು. ರಾಹುಲ್ ರೆಡ್ಡಿ ಬೈಕಲ್ಲಿ ಹೋಗುತ್ತಿರುವಾಗ ಟ್ರಕ್ಕಿಗೆ ಗುದ್ದಿ ಕೆಳಗೆ ಬಿದ್ದನು. ಬಳಿಕ ರಾಹುಲ್ ರೆಡ್ಡಿ ಇವರು ಮೆಹಬೂಬ್ ಪಟೇಲನಿಗೆ, ‘ನೀನು ಟ್ರಕ್ ರಸ್ತೆಯ ಮಧ್ಯ ಏಕೆ ನಿಲ್ಲಿಸಿರುವೆ ? ಎಂದಾಗ ಮೆಹಬೂಬ್ ಪಟೇಲನು ರಾಹುಲ ರೆಡ್ಡಿಯ ಜೊತೆ ವಾಗ್ವಾದಕ್ಕಿಳಿದನು. ಅವನು ಅವಾಚ್ಯ ಪದಗಳನ್ನು ಬಳಸಿದನು ಮತ್ತು ಬೈಗುಳ ಬೈಯಲು ಆರಂಭಿಸಿದನು.

೨. ಈ ಬಗ್ಗೆ ಮಾಹಿತಿ ದೊರೆಯುತ್ತಲೇ ರಾಹುಲ ರೆಡ್ಡಿ ಅವರ ಸಹೋದರ ರಘು ರೆಡ್ಡಿ ಘಟನಾ ಸ್ಥಳಕ್ಕೆ ತಲುಪಿದನು. ನಂತರ ಮೆಹೆಮೊದ್ ಪಟೇಲ್ ಮತ್ತು ಅವನ ಸ್ನೇಹಿತ ಸೈಯದ್ ಸುಲ್ತಾನ್, ಸಲ್ಮಾನ್ ಪಟೇಲ್, ಶೇಖ ಸಮೀರ್ ಇವರು ಅನಿರೀಕ್ಷಿತವಾಗಿ ಇಬ್ಬರೂ ಹಿಂದೂ ಯುವಕರ ಮೇಲೆ ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡಿರುವ ರಘು ರೆಡ್ಡಿ ಇವರಿಗೆ ಕಲಬುರಗಿಯ ಆಸ್ಪತ್ರೆಗೆ ಸೇರಿಸಲಾಗಿದೆ.