Jharkhand Train Accident : ಜಾರ್ಖಂಡದಲ್ಲಿ ‘ಹಾವಡಾ-ಮುಂಬಯಿ ಎಕ್ಸ್ಪ್ರೆಸ್’ನ ೧೮ ಭೋಗಿಗಳು ಹಳಿ ತಪ್ಪಿ ೩ ಜನರ ಸಾವು

ರಾಂಚಿ (ಜಾರ್ಖಂಡ್) – ಜಾರ್ಖಂಡದಲ್ಲಿನ ಚಕ್ರದಾರಪುರ್ ಇಲ್ಲಿ ಜುಲೈ ೩೦ ರ ಬೆಳಿಗ್ಗೆ ಹಾವಡಾ-ಮುಂಬಯಿ ಎಕ್ಸ್ಪ್ರೆಸ್ ನ ೧೮ ಭೋಗಿಗಳು ಹಳೆ ತಪ್ಪಿದೆ. ಇದರಲ್ಲಿ ೩ ಜನರು ಸಾವನ್ನಪ್ಪಿದ್ದು ೧೫೦ ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಈ ರೈಲು ಭೋಗಿಗಳು ಹಳೆ ತಪ್ಪಿ ಒಂದು ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಘಟನಾಸ್ಥಳದಲ್ಲಿ ಸಹಾಯಕಾರ್ಯ ನಡೆಯುತ್ತಿದೆ. ಗಾಯಾಳುಗಳಿಗೆ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಅಪಘಾತದ ನಂತರ ಈ ಮಾರ್ಗದಲ್ಲಿನ ಅನೇಕ ರೈಲುಗಳು ರದ್ದು ಪಡಿಸಲಾಗಿದೆ. ರೈಲ್ವೆ ನೀಡಿರುವ ಮಾಹಿತಿ ಪ್ರಕಾರ ಈ ಅಪಘಾತ ನಡೆಯುವುದೆಂದು ಅನುಮಾನ ಬರುತ್ತಲೆ ಚಾಲಕನು ರೈಲಿನ ವೇಗ ಕಡಿಮೆಗೊಳಿಸಿದ್ದನು. ಆದ್ದರಿಂದ ದೊಡ್ಡ ಅನರ್ಥ ತಪ್ಪಿದೆ ಎಂದು ಹೇಳಿದೆ. ಇಲ್ಲವಾದರೆ ಮೃತರ ಸಂಖ್ಯೆ ಹೆಚ್ಚುತ್ತಿತ್ತು.

ಸಂಪಾದಕೀಯ ನಿಲುವು

ರೈಲುಗಾಡಿಯ ಭೋಗಿಗಳು ಹಳಿತಪ್ಪುವ ಘಟನೆ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ ಏನಾದರೂ ಷಡ್ಯಂತ್ರ ಇದೆಯೇ ? ಇದರ ಶೋಧ ಮಾಡಬೇಕು !