ಧಾರವಾಡದಲ್ಲಿ ದೇವಸ್ಥಾನದ ಅರ್ಚಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ಭೋಜಗಾರ್ ಬಂಧನ

ಅರ್ಚಕ ವಾಮಾಚಾರ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ಹತ್ಯೆ !

ಧಾರವಾಡ – ಹುಬ್ಬಳ್ಳಿಯ ವೈಷ್ಣೋದೇವಿ ದೇವಸ್ಥಾನದ ಅರ್ಚಕ ದೇವೇಂದ್ರಪ್ಪಜ್ಜನ ಹತ್ಯೆ ಸಂಬಂಧಿಸಿದಂತೆ ಸಂತೋಷ ಭೋಜಗಾರ್ ಎಂಬಾತನನ್ನು ಬಂಧಿಸಲಾಗಿದೆ. ‘ದೇವೇಂದ್ರಪ್ಪಜ್ಜ ನನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮೇಲೆ ವಾಮಾಚಾರ ಮಾಡುತ್ತಿದ್ದರು. ಅವರಿಂದ ಹಲವು ಮನೆಗಳು ಧ್ವಂಸಗೊಂಡಿವೆ. ನಮ್ಮ ಕುಟುಂಬದ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ 6 ವರ್ಷಗಳಿಂದ ಕೊಲ್ಲಲು ಸಂಚು ರೂಪಿಸಿದ್ದೆ,’ ಎಂದು ಸಂತೋಷ್ ಹೇಳಿದ್ದಾರೆ.