ಬೆಳಗಾವಿಯಲ್ಲಿ ಶ್ರೀ ವಿಠ್ಠಲ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ – ಬೆಳಗಾವಿಯಿಂದ ಪಂಢರಪುರಕ್ಕೆ ತೆರಳಿದ್ದ ಶ್ರೀ ವಿಠ್ಠಲನ 3 ಭಕ್ತರ ಮೇಲೆ ಪಾನಮತ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೀರಜ್ ತಾಲೂಕಿನ ಮಳಗಾಂವ ಗ್ರಾಮದಲ್ಲಿ ನಡೆದಿದೆ. ಜುಲೈ 20 ರಂದು ಈ ಘಟನೆ ನಡೆದಿದೆ. ಸುರೇಶ ರಾಜುಕರ್, ಪರಶುರಾಮ ಜಾಧವ್ ಹಾಗೂ ಚಾಲಕನ ಮೇಲೆ ಹಲ್ಲೆ ನಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀ ವಿಠ್ಠಲನ ದರ್ಶನ ಪಡೆದು ಪಂಢರಪುರದಿಂದ ಬೆಳಗಾವಿಗೆ ಹಿಂತಿರುಗುತ್ತಿದ್ದಾಗ ದಾರಿ ತಪ್ಪಿದರು. ಬೆಳಗಾವಿಯ ಬದಲು ಮಲಗಾಂವ್ ತಲುಪಿದರು. ಆಗ ಅವರ ವಾಹನದ ಮುಂದೆ ನಾಲ್ಕಾರು ವಾಹನ ಬಂದು ಮೂವರೊಂದಿಗೆ ವಾಗ್ವಾದ ನಡೆಸಿ, ನಂತರ ಸಹಚರರನ್ನು ಕರೆದು ಥಳಿಸಿದ್ದಾರೆ.