ಮಾಲ್ ನಲ್ಲಿ ಪಂಚೆ ಉಟ್ಟ ರೈತನಿಗೆ ಪ್ರವೇಶ ನಿರಾಕರಿಸಿದ ಪ್ರಕರಣ

ಬೆಂಗಳೂರು – ಪಂಚೆ ಮತ್ತು ನೆಹರು ಶರ್ಟ್ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಿಸಿದ ಬೆಂಗಳೂರಿನ ‘ಜಿಟಿ ವರ್ಲ್ಡ್ ಮಾಲ್’ ವಿರುದ್ಧ ಸರಕಾರ ಕ್ರಮ ಕೈಗೊಂಡಿದೆ. ಮಾಲ್ ಅನ್ನು 7 ದಿನಗಳ ಕಾಲ ಮುಚ್ಚುವಂತೆ ಶಿಕ್ಷೆ ನೀಡಲಾಗಿದೆ. ಹಾವೇರಿಯ ರೈತ ಫಕೀರಪ್ಪನು ಪತ್ನಿ ಸಮೇತ ಬೆಂಗಳೂರಿನಲ್ಲಿ ಓದುತ್ತಿರುವ ಮಗನನ್ನು ಭೇಟಿಯಾಗಲು ಬಂದಿದ್ದರು. ಮೂವರು ಮಾಲ್ನಲ್ಲಿರುವ ‘ಮಲ್ಟಿಪ್ಲೆಕ್ಸ್ನಲ್ಲಿ’ ಚಲನಚಿತ್ರ ವೀಕ್ಷಿಸಲು ಹೋದಾಗ, ಮಾಲ್ನ ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ಅವರನ್ನು ತಡೆದು ಮಾಲ್ನ ನಿಯಮಗಳನ್ನು ಹೇಳತೊಡಗಿದ. ಭದ್ರತಾ ಸಿಬ್ಬಂದಿ ಅವರಿಗೆ ‘ಪ್ಯಾಂಟ್ ಹಾಕಿಕೊಂಡು ಬಂದರೆ ಮಾತ್ರ ಒಳಗೆ ಬಿಡುತ್ತೇನೆ’ ಎಂದರು. ತಂದೆ ಮತ್ತು ಮಗ ಇಬ್ಬರೂ ಭದ್ರತಾ ಸಿಬ್ಬಂದಿಗೆ ಪದೇ ಪದೇ ಮನವಿ ಮಾಡಿದರೂ ಅವರು ಕೇಳಲಿಲ್ಲ.
ಈ ಘಟನೆಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ವೀಡಿಯೊವನ್ನು ಗಮನಿಸಿದ ಸರಕಾರವು ಭಾರತೀಯ ದಂಡ ಸಂಹಿತೆ ಕಲಂ 126 (2) (ತಪ್ಪಾದ ಪದ್ದತಿಯಿಂದ ಒಬ್ಬರನ್ನು ನಿರ್ಬಂಧಿಸುವುದು) ಅಡಿಯಲ್ಲಿ ಮಾಲ್ ನ ಮಾಲೀಕರು ಮತ್ತು ಭದ್ರತಾ ಸಿಬ್ಬಂದಿಯ ವಿರುದ್ಧ ಅಪರಾಧವನ್ನು ದಾಖಲಿಸಿ ಮಾಲ್ ಅನ್ನು 7 ದಿನಗಳವರೆಗೆ ಮುಚ್ಚಲು ಆದೇಶ ನೀಡಿತು. ಜುಲೈ 16 ರಂದು ಈ ಘಟನೆ ನಡೆದಿದ್ದು, ಜುಲೈ 18 ರಂದು ಮಾಲ್ ವಿರುದ್ಧ ಕ್ರಮ ಕೈಗೊಳ್ಳಲಾಯಿತು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath