Bihar Hindu Family Attacked : ಮೊಹರಂ ಮೆರವಣಿಗೆಯಲ್ಲಿ ಮತಾಂಧದಿಂದ ಯಾವುದೇ ಕಾರಣ ಇಲ್ಲದೇ ಹಿಂದೂ ಕುಟುಂಬದ ಮೇಲೆ ಮಾರಕಾಸ್ತ್ರದಿಂದ ದಾಳಿ !

ಸಮಸ್ತಿಪುರ (ಬಿಹಾರ) – ಇಲ್ಲಿಯ ದರಸಿಂಹಸರಾಯ್ ಇಲ್ಲಿ ಜುಲೈ ೧೪ ರಂದು ನಡೆದ ಮೊಹರಂ ಮೆರವಣಿಗೆಯಲ್ಲಿ ಸಹಭಾಗಿ ಆಗಿರುವ ಮತಾಂಧರು ರಸ್ತೆಯಲ್ಲಿ ಹೋಗುತ್ತಿದ್ದ ಒಂದು ಕಾರಿನ ಮೇಲೆ ತಲುವಾರ, ಹಾಕಿ ಸ್ಟಿಕ್ ಮತ್ತು ಲಾಠಿಗಳಿಂದ ದಾಳಿ ನಡೆಸಿದ್ದಾರೆ. ಈ ಕಾರಲ್ಲಿ ಅಮಿತೇಶ ಕುಮಾರ ಮತ್ತು ಸಾಧನಾ ಕುಮಾರಿ ಈ ದಂಪತಿಗಳು ಮತ್ತು ಅವರ ಪುಟ್ಟ ಮಗು, ಹೀಗೆ ಮೂರು ಜನರು ಮಧುಬನಿಯಿಂದ ಪಟನಾಗೆ ಹೊರಟಿದ್ದರು. ದಾರಿಯಲ್ಲಿ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ಪುಟ್ಟ ಮಗು ಗಾಯಗೊಂಡಿದೆ. ಮತಾಂಧರು ಕಾರಿನ ಗಾಜುಗಳು ಒಡೆದಿದ್ದಾರೆ. ಈ ಪ್ರಕರಣದ ಬಗ್ಗೆ ಈ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ೫ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿವೇಕ್ ಇವರು ಮಾಹಿತಿ ನೀಡಿದ್ದಾರೆ. ಸಂತ್ರಸ್ತ ದಂಪತಿಗಳು, ಘಟನೆ ಘಟಿಸಿದ ನಂತರ ಪೊಲೀಸರಿಗೆ ಅನೇಕ ಸಾರಿ ಫೋನ್ ಮಾಡಿದರು ಕೂಡ ಪೊಲೀಸರು ಫೋನ್ ತೆಗೆಯಲಿಲ್ಲ. (ಅಂತಹ ಪೊಲೀಸರನ್ನು ತಕ್ಷಣ ಅಮಾನತುಗೊಳಿಸಬೇಕು, ಇಂತಹ ಪೊಲೀಸರು ಜನರ ರಕ್ಷಣೆ ಹೇಗೆ ಮಾಡುವರು ? – ಸಂಪಾದಕರು) ಮೆರವಣಿಗೆಯಲ್ಲಿ ನೂರಾರು ಮತಾಂಧರು ಸಹಭಾಗಿ ಆಗಿದ್ದರು. ಇದರಲ್ಲಿ ಮತಾಂಧರು ಅನೇಕ ದ್ವಿಚಕ್ರ ವಾಹನದಲ್ಲಿರುವವರನ್ನು ಅಮಾನುಷವಾಗಿ ಹೊಡೆದಿರುವುದಾಗಿ ಹೇಳಲಾಗುತ್ತಿದೆ.

ನವಾದಾದಲ್ಲಿ ಪ್ಯಾಲೇಸಟೈನ್ ಧ್ವಜ ಹಾರಾಟ !

ನವಾದದಲ್ಲಿ ಧಮೌಲ ಮಾರುಕಟ್ಟೆಯಲ್ಲಿ ಮೊಹರಂ ಮೆರವಣಿಗೆಯಲ್ಲಿ ಪ್ಯಾಲೇಸಟೈನ್ ಧ್ವಜ ಹರಿಸಲಾಯಿತು. ‘ನ್ಯೂಸ್ 18 ಇದರ ಜಾಲತಾಣದಲ್ಲಿ ಈ ವಾರ್ತೆ ಪ್ರಸಾರ ಮಾಡಿದ ನಂತರ ನವಾದಾ ಪೊಲೀಸರು ವಿವಾದಿತ ಧ್ವಜ ವಶಪಡಿಸಿಕೊಂಡು ಮೂರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ನವಾದಾ ಪೊಲೀಸರು ಕೂಡ ಅವರ ಸಾಮಾಜಿಕ ಜಾಲತಾಣದಲ್ಲಿನ ಖಾತೆಯಿಂದ ಈ ವಾರ್ತೆಯ ಕುರಿತು ಮಾಹಿತಿ ನೀಡಿದ್ದಾರೆ. ಈ ಹಿಂದೆ ಕೂಡ ಇಲ್ಲಿ ಇಂತಹ ಘಟನೆಗಳು ನಡೆದಿದ್ದವು.

ಸಂಪಾದಕೀಯ ನಿಲುವು

ಹೀಗಾಗಲು ಸಮಸ್ತಿಪುರ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಹಿಂದುಗಳ ನಿರ್ಲಕ್ಷತನ, ಪೊಲೀಸರ ನಿಷ್ಕ್ರಿಯತೆ ಮತ್ತು ಸರಕಾರದ ಅಸಹಾಯಕತೆಯಿಂದ ಮತಾಂಧರು ಉದ್ಧಟತನರಾಗಿದ್ದಾರೆ. ಇದಕ್ಕೆ ಏಕೈಕ ಉಪಾಯ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !