ಪಂಜಾಬಿನಲ್ಲಿ ರಾಷ್ಟ್ರೀಯ ಕೇಸರಿ ಸೇನೆಯ ಉಪಾಧ್ಯಕ್ಷ ಪ್ರವೀಣ ಕುಮಾರ ಮೇಲೆ ಮಾರಣಾಂತಿಕ ಹಲ್ಲೆ !

ಚಂಡೀಗಡ – ಪಂಜಾಬನ ಲುಧಿಯಾನದಲ್ಲಿ ‘ಶಿವಸೇನಾ ಪಂಜಾಬ’ನ ಮುಖಂಡ ಸಂದೀಪ ಥಾಪರ ಗೋರಾ ಇವರ ಮೇಲೆ ಜುಲೈ 5 ರಂದು ಮಾರಣಾಂತಿಕ ದಾಳಿ ನಡೆದಿತ್ತು. ಈ ಪ್ರಕರಣ ಶಾಂತವಾಗುವುದರಲ್ಲಿಯೇ ಪಂಜಾಬನಲ್ಲಿ ಮತ್ತೋರ್ವ ಹಿಂದೂ ಮುಖಂಡರ ಮೇಲೆ ದಾಳಿ ನಡೆದಿದೆ. ಪಂಜಾಬನ ಅಮೃತಸರದಲ್ಲಿ ಜುಲೈ 10ರ ರಾತ್ರಿ ದ್ವಿಚಕ್ರವಾಹನದಿಂದ ಬಂದಿದ್ದ 4 ಅಜ್ಞಾತರು ರಾಷ್ಟ್ರೀಯ ಭಗವಾ ಸೇನೆಯ ಉಪಾಧ್ಯಕ್ಷರಾದ ಪ್ರವೀಣ ಕುಮಾರ ಇವರ ಮೇಲೆ ಗುಂಡು ಹಾರಿಸಿದರು. ದಾಳಿಕೋರರು ಗುಂಡಿ ಹಾರಿಸಿ ಪ್ರವೀಣ ಕುಮಾರರನ್ನು ಕೊಲ್ಲಲು ಪ್ರಯತ್ನಿಸಿದರು. ದಾಳಿಕೋರರು 3 ಗುಂಡುಗಳನ್ನು ಹಾರಿಸಿದರು, ಅದರಲ್ಲಿ ಒಂದು ಗುಂಡು ಪ್ರವೀಣ ಕುಮಾರ ಇವರ ಹೆಗಲಿಗೆ ತಗುಲಿತು. ಅದರಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಘಟನಾಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಚಿತ್ರೀಕರಣವಾಗಿದೆ. ಪ್ರವೀಣ ಕುಮಾರರನ್ನು ತಕ್ಷಣವೇ ಗುರುನಾನಕ ದೇವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

1. ಪ್ರವೀಣ ಕುಮಾರ ಇವರ ಮಾಲೀಕತ್ವದ ಇ-ರಿಕ್ಷಾ ಶೋರೂಮ್ ಇದೆ. ದಾಳಿ ನಡೆಸಿದ ಯುವಕರು ಅವರ ಶೋರೂಮ್ ಗೆ ನುಗ್ಗಿದರು. ಇಬ್ಬರು ಯುವಕರು ಶೋರೂಮ್ ಗೆ ನುಗ್ಗಿದರು. ಇನ್ನಿಬ್ಬರು ಯುವಕರು ಹೊರಗೆ ನಿಂತರು. ಒಳಗೆ ಹೋದ ಯುವಕರ ಮುಖಗಳು ಬಟ್ಟೆಯಿಂದ ಮುಚ್ಚಲಾಗಿತ್ತು. ಆ ಯುವಕರು ಬಂದೂಕು ಹಿಡಿದು ಪ್ರವೀಣ ಕುಮಾರ ಇವರ ಮೇಲೆ ಗುಂಡು ಹಾರಿಸಿದರು.

2. ಗುಂಡುಗಳನ್ನು ಹಾರಿಸಿದ ಬಳಿಕ ಆರೋಪಿಯು ತಕ್ಷಣವೇ ಘಟನಾ ಸ್ಥಳದಿಂದ ಪರಾರಿಯಾದರು. ಈ ಘಟನೆಯು ಮಾಹಿತಿ ಸಿಗುತ್ತಲೇ ಮಜಿಠಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

3. ಪಂಜಾಬನ ಲುಧಿಯಾನದಲ್ಲಿ `ಶಿವಸೇನಾ ಪಂಜಾಬ’ನ ನಾಯಕ ಸಂದೀಪ ಥಾಪರ ಗೋರಾ ಇವರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಅದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ನಿರಂತರವಾಗಿ ಖಲಿಸ್ತಾನ ವಿರುದ್ಧ ನಿಲುವನ್ನು ಹೊಂದಿರುವುದರಿಂದ ಅವರ ಮೇಲೆ ದಾಳಿ ನಡೆದಿದೆಯೆಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

  • ಪಂಜಾಬಿನಲ್ಲಿ ಹಿಂದೂ ನಾಯಕರ ಮೇಲಿನ ದಾಳಿಯ ಪ್ರಕರಣಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರ ಅವರ ರಕ್ಷಣೆಗಾಗಿ ಕ್ರಮಕೈಗೊಳ್ಳುವುದೇ ?
  • ಹಿಂದುತ್ವನಿಷ್ಠರಿಗೆ ಮುಸ್ಲಿಂ ಕಟ್ಟರವಾದಿಗಳು ಮತ್ತು ಕ್ರೈಸ್ತರು ಪೋಷಿಸಿರುವ ನಕ್ಸಲವಾದಿಗಳಿಂದ ಅಪಾಯವಿತ್ತು; ಆದರೆ ಪಂಜಾಬನಲ್ಲಿ ಖಲಿಸ್ತಾನವಾದಿ ಸಿಖ್ಖರೂ ಹಿಂದೂಗಳ ವಿನಾಶಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕಾಗಿದೆ !