Eknath Shinde Replies to Rahul Gandhi: ರಾಹುಲ್ ಗಾಂಧಿಗೆ ಸರಿಯಾದ ಸಮಯದಲ್ಲಿ ಹಿಂದೂ ಸಮಾಜ ಸೇಡು ತೀರಿಸಿಕೊಳ್ಳಲಿದೆ ! – ಮುಖ್ಯಮಂತ್ರಿ ಏಕನಾಥ್ ಶಿಂದೆ

ಮುಂಬಯಿ, ಜು.4 (ಸುದ್ದಿ.) – ಸಂಸತ್ತಿನಲ್ಲಿ ಹಿಂದೂ ಸಮಾಜವನ್ನು ಅವಮಾನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹಿಂದೂ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ. ಗಾಂಧಿ ಮಾಡಿದ ಆರೋಪಕ್ಕೆ ಹಿಂದೂ ಸಮಾಜ ಸರಿಯಾದ ಸಮಯದಲ್ಲಿ ಸೇಡು ತೀರಿಸಿಕೊಳ್ಳುತ್ತದೆ. ಅವರ ಹೇಳಿಕ ಬಗ್ಗೆ ಖಂಡಿತವಾಗಿಯೂ ಉತ್ತರ ಸಿಗಲಿದೆ ಎಂದು ಜುಲೈ 3ರಂದು ವಿಧಾನ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂದೆ ಎಚ್ಚರಿಸಿದರು.

ಲೋಕಸಭೆ ವಿರೋಧಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 2 ದಿನಗಳ ಹಿಂದೆ ಹಿಂದೂ ಸಮಾಜ ಹಿಂಸಾತ್ಮಕವಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಶಿಂದೆ, ಒಂದು ನಿರ್ದಿಷ್ಟ ಸಮುದಾಯವನ್ನು ಮೆಚ್ಚಿಸಲು ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ನೀಡಿರುವುದು ತುಂಬಾ ಆತಂಕಕಾರಿಯಾಗಿದೆ. ಹಿಂದೂ ಸಮಾಜವು ಸಹಿಷ್ಣು ಮತ್ತು ತಾಳ್ಮೆಯಿಂದ ಇದೆ. ವಿರೋಧ ಪಕ್ಷಗಳ ಟೀಕೆಗೆ ನಾವು ವಿಶೇಷ ಗಮನ ಹರಿಸುವುದಿಲ್ಲ. ಮೊದಲು ಹಿಂದೂಗಳ ಮೇಲೆ ದಾಳಿ ಮಾಡುವುದು, ಹಿಂದೂಗಳನ್ನು ‘ಹಿಂಸಾತ್ಮಕ’ ಎಂದು ಕರೆಯುವುದು ಮತ್ತು ವಾರಿಯಲ್ಲಿ ಸಹಭಾಗಿ ಆಗುವುದು ಇದು ರಾಹುಲ್ ಗಾಂಧಿಯ ದ್ವಂದ್ವತೆಯಾಗಿದೆ; ಆದರೆ ಈಗ ದೇಶದ ಹಿಂದೂಗಳು ಎಚ್ಚೆತ್ತುಕೊಂಡಿದ್ದು, ಈ ಅವಮಾನವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.