Congress Office Vandalized: ಕರ್ಣಾವತಿ(ಗುಜರಾತ್): ಬಜರಂಗ ದಳದ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಧ್ವಂಸ !

ರಾಹುಲ್ ಗಾಂಧಿ ಅವರ ಹಿಂದೂ ವಿರೋಧಿ ಹೇಳಿಕೆಗೆ ಬಜರಂಗ ದಳದ ಕಾರ್ಯಕರ್ತರ ಆಕ್ರೋಶ

ಕರ್ಣಾವತಿ – ‘ಯಾರು ಸ್ವತಃ ಹಿಂದೂಗಳು ಎಂದು ಹೇಳಿಕೊಳ್ಳುತ್ತಾರೋ, ಅವರು 24 ಗಂಟೆಯೂ ಹಿಂಸಾಚಾರ ಮಾಡುತ್ತಾರೆ’, ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಗುಜರಾತ್‌ನಲ್ಲಿ ಬಜರಂಗ ದಳದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ‘ರಾಜೀವ್ ಗಾಂಧಿ ಭವನ’ದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಯನ್ನು ಧ್ವಂಸಗೊಳಿಸಿದರು. ರಾಹುಲ್ ಗಾಂಧಿಯವರ ಹಿಂದೂ ವಿರೋಧಿ ಹೇಳಿಕೆಯಿಂದಾಗಿ ಬಜರಂಗ ದಳದ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದರು. ಆಕ್ರೋಶಿತ ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ಟೀಕಿಸುವ ಭಿತ್ತಿ ಪತ್ರಗಳನ್ನು (ಪೋಸ್ಟರ್‌ಗಳನ್ನು) ಕಚೇರಿಯಲ್ಲಿ ಅಂಟಿಸಿ ವಿರೋಧ ವ್ಯಕ್ತಪಡಿಸಿದರು.