ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನ (೨೮ ಜೂನ್) : ಉದ್ಬೋಧನಾ ಸತ್ರ
ದೇವಸ್ಥಾನಗಳ ರಕ್ಷಣೆಗಾಗಿ ನ್ಯಾಯಾಂಗ ಪ್ರಯತ್ನ

೧೯೯೨ ರಲ್ಲಿ ‘ಐ.ಎಸ್.ಐ.’ ಈ ಪಾಕಿಸ್ತಾನದ ಗುಪ್ತಚರ ಸಂಘಟನೆಯು ನನ್ನನ್ನು ಕೊಲ್ಲಲು ೨ ಬಾರಿ ಯೋಜನೆ ಹಾಕಿತ್ತು. ನನ್ನನ್ನು ಕೊಲ್ಲಲು ಕೆಲವು ಜನರು ಬಂದಿದ್ದರು; ಆದರೆ ನಾನು ಅಲ್ಲಿ ಇರಲಿಲ್ಲ. ಆದುದರಿಂದ ನನ್ನ ಸ್ನೇಹಿತನನ್ನು ಹೊಡೆದು ಹೋದರು. ನಾನು ಯಾವಾಗಲೂ ಹೋಗುತ್ತಿದ್ದ ಸ್ಥಳಕ್ಕೆ ನನ್ನನ್ನು ಕೊಲ್ಲಲು ಬಂದಿದ್ದರು. ನನ್ನ ಮನೆಯಿಂದ ೧೫ ಕಿಲೋಮೀಟರ್ ಅಂತರದಲ್ಲಿರುವ ಒಂದು ದೇವಸ್ಥಾನವನ್ನು ಮುಸಲ್ಮಾನರು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಈ ದೇವಸ್ಥಾನಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಬಂದು ಹೋಗಿದ್ದರು. ಮಾಹಿತಿ ಅಧಿಕಾರವನ್ನು ಬಳಸಿ ನಾನು ಈ ದೇವಸ್ಥಾನದ ಭೂಮಿಯನ್ನು ಬಿಡಿಸಲು ನ್ಯಾಯಾಂಗ ಹೋರಾಟ ನಡೆಸಿದೆನು.
🚩Sri Hanumanji keeps protecting and guiding me and I shall keep fighting to protect the temples till my last breath – Adv Nam Ram Reddy, Rashtreeya Vanar Sena Telangana
Talk on #Free_Hindu_Temples at Vaishvik Hindu Rashtra Mahotsav
🎯 A whopping 3000 acres of temple lands… pic.twitter.com/vjDCVvty65
— Sanatan Prabhat (@SanatanPrabhat) June 28, 2024
ಇಲ್ಲಿಯವರೆಗೆ ರಾಷ್ಟ್ರೀಯ ವಾನರ ಸೇನೆಯ ಮೂಲಕ ದೇವಸ್ಥಾನಗಳ ೩ ಸಾವಿರ ಎಕರೆ ಭೂಮಿಯನ್ನು ಮುಸಲ್ಮಾನರ ನಿಯಂತ್ರಣದಿಂದ ಬಿಡಿಸಲಾಗಿದೆ. ಈ ಕೆಲಸವನ್ನು ಮಾಡಲೆಂದೇ ಭಗವಂತನು ನನ್ನನ್ನು ಕಾಲಕಾಲಕ್ಕೆ ರಕ್ಷಿಸಿದ್ದಾನೆ. ಹನುಮಂತನು ನನ್ನ ಬೆನ್ನಿಗಿದ್ದಾನೆ. ಆದುದರಿಂದ ಇಲ್ಲಿಯವರೆಗೆ ಒಂದೇ ಒಂದು ದೇವಸ್ಥಾನದ ಮೊಕದ್ದಮೆಯನ್ನು ನಾನು ಸೋತಿಲ್ಲ. ಕಳೆದ ೧೫ ವರ್ಷಗಳಲ್ಲಿ ವಾನರ ಸೇನೆಯ ಕಾರ್ಯ ತೆಲಂಗಾಣಾದೊಂದಿಗೆ ಆಂಧ್ರಪ್ರದೇಶ ಮತ್ತು ಕರ್ನಾಟಕ ಈ ರಾಜ್ಯಗಳಲ್ಲಿಯೂ ಹೆಚ್ಚುತ್ತಿದೆ. ದೇವಸ್ಥಾನಗಳ ರಕ್ಷಣೆಯ ಕಾರ್ಯದಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ನನಗೆ ಸಹಾಯ ಮಾಡುತ್ತಿದ್ದಾರೆ. ನಮ್ಮ ಕಾರ್ಯ ಪಾರದರ್ಶಕವಾಗಿದೆ. ಒಂದು ದೊಡ್ಡ ಮರಕ್ಕಿಂತ ಚಿಕ್ಕ-ಚಿಕ್ಕ ಅನೇಕ ಗಿಡಗಳಿದ್ದರೆ, ಹೆಚ್ಚು ಆಮ್ಲಜನಕ ಸಿಗುತ್ತದೆ. ಅದರಂತೆ ವಿವಿಧ ಸಂಘಟನೆಗಳ ಮಾಧ್ಯಮಗಳಿಂದ ಧರ್ಮಕಾರ್ಯ ಮಾಡಬೇಕು; ಆದರೆ ಎಲ್ಲರೂ ಒಟ್ಟಿಗೆ ಇರುವುದು ಮಹತ್ವದ್ದಾಗಿದೆ. ದೇವಸ್ಥಾನಗಳ ರಕ್ಷಣೆಗಾಗಿ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನುಬದ್ಧ ಹೋರಾಟಕ್ಕಾಗಿ ನಾನು ಸಹಾಯ ಮಾಡುವೆನು. ಎಲ್ಲಿಯವರೆಗೆ ಜೀವಂತವಾಗಿರುವೆನೋ, ಅಲ್ಲಿಯವರೆಗೆ ದೇವಸ್ಥಾನಗಳ ರಕ್ಷಣೆಗಾಗಿ ನಾನು ಹೋರಾಡುವೆನು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್