ದೇವಸ್ಥಾನದ ಪರಿಸರದಿಂದ ಗೋವುಗಳನ್ನು ಕದಿಯುವ ಪ್ರಯತ್ನವನ್ನು ವಿಫಲ ಗೊಳಿಸಿದ ಪೊಲೀಸರು !

ಕುಂದಾಪುರ – ಇಲ್ಲಿನ ಕಮಲಶಿಲೆ ದೇವಸ್ಥಾನದಲ್ಲಿ ಮಧ್ಯರಾತ್ರಿ ಇಬ್ಬರು ಕಳ್ಳರು ದೇವಸ್ಥಾನ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ ಅಲ್ಲಿ ಕಟ್ಟಿ ಹಾಕಿದ್ದ 3 ಹಸುಗಳನ್ನು ಕದಿಯಲು ಪ್ರಯತ್ನಿಸಿದ್ದಾರೆ.

ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಕಂಡು ಬಂದಿದೆ. ಬಳಿಕ ಪೊಲೀಸರು ಕೂಡಲೇ ದೇವಸ್ಥಾನದ ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರು ಆಗಮಿಸಿದ ಮಾಹಿತಿ ತಿಳಿದ ತಕ್ಷಣ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.