3 ಸಾವಿರದ 900 ಕೆಜಿ ತೂಕದ ಗದೆಯನ್ನು ಕೂಡ ಸ್ಥಾಪಿಸಲು ನಿರ್ಧಾರ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿ ದೇಶದ ಅತಿ ಉದ್ದದ ಬಾಣ-ಬಿಲ್ಲು ಸ್ಥಾಪಿತಗೊಳ್ಳಲಿದೆ. ಈ ಧನಸ್ಸು ಬಾಣದ ಉದ್ದ 33 ಅಡಿ ಮತ್ತು ತೂಕ 3,400 ಕೆ.ಜಿ. ಇರಲಿದೆ. ಧನಸ್ಸು ಬಾಣದ ಜೊತೆಗೆ 3,900 ಕೆಜಿ ತೂಕದ ಗದೆಯೂ ನಿರ್ಮಾಣವಾಗಲಿದೆ. ಈ ಬಿಲ್ಲು, ಬಾಣ ಮತ್ತು ಗದೆಯನ್ನು ಎಲ್ಲಿ ಸ್ಥಾಪಿಸಬೇಕು? ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಗದೆ, ಬಿಲ್ಲು ಮತ್ತು ಬಾಣಗಳನ್ನು ಪಂಚ ಧಾತುಗಳಿಂದ ಸಿದ್ಧಪಡಿಸಲಾಗಿದೆ. ಇದನ್ನು ರಾಜಸ್ಥಾನದ ಸುಮೇರಪುರದ ಶಿವಗಂಜ, ಸುಮೇರಪೂರನ ‘ಶ್ರೀಜಿ ಸನಾತನ ಸೇವಾ ಸಂಸ್ಥೆ’ ನಿರ್ಮಿಸಿದೆ. ಅಲ್ಲಿಂದ ಅದನ್ನು ಅಯೋಧ್ಯೆಗೆ ತರಲಾಗುವುದು.
1. ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸ’ದ ಮುಖ್ಯಸ್ಥ ಚಂಪತ್ ರಾಯ್ ಮಾತನಾಡಿ, ಬಿಲ್ಲು, ಬಾಣ, ಗದೆಯನ್ನು ಸದ್ಯ ಕರಸೇವಕಪುರದಲ್ಲಿ ಇಡಲಾಗುವುದು. ನಂತರ ಅದನ್ನು ಎಲ್ಲಿ ಸ್ಥಾಪಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
2. ಈ ಹಿಂದೆ ರಾಜಸ್ಥಾನದ ಭಿಲವಾಡಾದಲ್ಲಿ 17 ಅಡಿ ಉದ್ದ ಮತ್ತು 900 ಕೆಜಿ ತೂಕದ ಬಿಲ್ಲು ತಯಾರಿಸಲಾಗಿತ್ತು. ಹಾಗೆಯೇ ಇಂದೋರ್ನ ಪಿತೃ ಪರ್ವತದಲ್ಲಿ ದೇಶದ ಅತ್ಯಂತ ಭಾರವಾದ ಮತ್ತು ಉದ್ದದ ಗದೆಯನ್ನು ಸ್ಥಾಪಿಸಲಾಗಿದೆ. ಅದರ ತೂಕ 21 ಟನ್ ಮತ್ತು ಉದ್ದ 45 ಅಡಿ ಆಗಿದೆ.
3. ಮತ್ತೊಂದೆಡೆ, ಅಲಿಗಡದಿಂದ ಅಯೋಧ್ಯೆಗೆ 400 ಕಿಲೋ ತೂಕದ ಬೀಗವನ್ನು ತರಲಾಗಿದೆ. 10 ಅಡಿ ಉದ್ದ ಮತ್ತು 4 ಅಡಿ ಅಗಲವಿರುವ ಈ ಬೀಗದ ದಪ್ಪ 9.5 ಇಂಚು ಆಗಿದೆ. 4 ಅಡಿ ಉದ್ದದ ಕೀಲಿ 30 ಕೆ.ಜಿ. ಭಾರವಿದೆ. ಈ ಬೀಗವನ್ನು ಸಿದ್ಧಪಡಿಸಲು ಎರಡು ಲಕ್ಷ ರೂಪಾಯಿ ಖರ್ಚಾಗಿದೆ. ಬೀಗದ ಉದ್ಯಮಿ ಶ್ರೀ. ಸತ್ಯಪ್ರಕಾಶರಿಗೆ ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ದೇವಸ್ಥಾನಕ್ಕೆ ಬೀಗವನ್ನು ಉಡುಗೊರೆಯಾಗಿ ನೀಡಬೇಕು ಎನ್ನುವ ಆಶಯವಾಗಿತ್ತು. ಆದರೆ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯಾಗುವ 41 ದಿನಗಳ ಮೊದಲೇ ಅವರು ನಿಧನರಾದರು.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case