RSS Dattatreya Hosabale Statement : ಯಾರೋ ಒಬ್ಬ ಮಹಾಪುರುಷ ಹಿಂದೂಗಳನ್ನು ಎಬ್ಬಿಸುತ್ತಾರೆ ಮತ್ತು ಹಿಂದೂಗಳು ಮತ್ತೆ ನಿದ್ರಿಸುತ್ತಾರೆ!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘ ಚಾಲಕ ದತ್ತಾತ್ರೇಯ ಹೊಸಬಾಳೆ ಇವರ ಹೇಳಿಕೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಹಿಂದೂ ಸಮಾಜದಲ್ಲಿ ಒಂದು ಸಮಸ್ಯೆ ಇದೆ, ಯಾರೋ ಒಬ್ಬ ಮಹಾನ್ ವ್ಯಕ್ತಿ ಹಿಂದೂಗಳನ್ನು ಎಚ್ಚರಗೊಳಿಸುತ್ತಾರೆ; ಆದರೆ ಅವರು ಮತ್ತೆ ನಿದ್ರಿಸುತ್ತಾರೆ. ಇದು ಒಮ್ಮೆ ಅಲ್ಲ ಹಲವು ಬಾರಿ ಸಂಭವಿಸಿದೆ. ಹಿಂದೂ ಸಮಾಜಕ್ಕೆ ಮತ್ತೆ ಮತ್ತೆ ಜಾಗೃತಗೊಳಿಸಬೇಕಾಗಿದೆ. ಡಾ. ಹೆಡಗೇವಾರ್ ಕೂಡ ಅದನ್ನೇ ಮಾಡಿದ್ದಾರೆ. ಯಾವಾಗಲೂ ಹಿಂದೂಗಳನ್ನು ಜಾಗೃತಗೊಳಿಸಬೇಕಾಗಿದೆ, ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇಲ್ಲಿ ಹೇಳಿದ್ದಾರೆ. ಅವರು ಸಂಘದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ದತ್ತಾತ್ರೇಯ ಹೊಸಬಾಳೆ ಮಾಡಿದ ಮಾರ್ಗದರ್ಶನ

1. ಕಳೆದ 100 ವರ್ಷಗಳಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದೂ ಸಮುದಾಯವನ್ನು ಜಾಗೃತಗೊಳಿಸುತ್ತಿದೆ. ಹಾಗಾಗಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ 100 ವರ್ಷಗಳಿಂದ ನಿರಂತರವಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತವನ್ನು ಹೊಸ ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿಲ್ಲ, ಅದು ಮೊದಲಿನಿಂದಲೂ ಹಿಂದೂ ರಾಷ್ಟ್ರವಾಗಿ ಇದೆ.

2. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಜಾತಿಗಳ ಮಧ್ಯೆ ವಿಭಜಿಸಲ್ಪಟ್ಟ ಹಿಂದೂಗಳನ್ನು ರಾಷ್ಟ್ರೀಯ ಹಿಂದೂಗಳನ್ನಾಗಿ ಮಾಡುತ್ತಿದೆ. ಸಂಘವು ಹಿಂದೂಗಳನ್ನು ಶಕ್ತಿಶಾಲಿಗಳನ್ನಾಗಿ ಮಾಡುತ್ತಿದೆ.

3. ಭಾರತ ಈಗ ಮತ್ತೆ ಉದಯಿಸುತ್ತಿದೆ ಮತ್ತು ಅದು ಪ್ರಪಂಚದ ಕಲ್ಯಾಣಕ್ಕಾಗಿ ಉದಯಿಸುತ್ತಿದೆ. ಭಾರತದ ಪ್ರಗತಿ ಯಾರನ್ನೂ ಗುಲಾಮರನ್ನಾಗಿ ಮಾಡಿ ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

https://twitter.com/SanatanPrabhat/status/1914999336385081784