ಹಿಂದಿ ಚಿತ್ರರಂಗದ ಕಲಾವಿದರಿಂದ ಪಹಲಗಾಮ್ ಘಟನೆಯ ಖಂಡನೆ!

ಮುಂಬಯಿ – ಈ ಘಟನೆಯ ದುಃಖ ಇದ್ದೇ ಇದೆ; ಆದರೆ ಕೋಪಕ್ಕೆ ಈಗ ಎಲ್ಲೆಯೇ ಇಲ್ಲ. ನನ್ನ ಅನುಭವದಿಂದ ಕಾಶ್ಮೀರದಲ್ಲಿ ಹಿಂದೂಗಳೊಂದಿಗೆ ಹೀಗಾಗುವುದನ್ನು ನಾನು ಬಹಳಷ್ಟು ನೋಡಿದ್ದೇನೆ. ‘ಕಾಶ್ಮೀರ್ ಫೈಲ್ಸ್’ ಆ ಚಲನಚಿತ್ರ ಅದರ ಒಂದು ಸಣ್ಣ ತುಣುಕಾಗಿತ್ತು. ಜನರು ಅದನ್ನು ‘ಪ್ರಚಾರದ ಚಲನಚಿತ್ರ’ ಎಂದರು. ಹೃದಯದಲ್ಲಿ ನಡೆಯುತ್ತಿರುವುದನ್ನು ವರ್ಣಿಸಲು ಪದಗಳು ಸಾಲುತ್ತಿಲ್ಲ. ಇಂದು ಮಾತುಗಳು ನಪುಂಸಕವಾಗಿವೆ ಎಂದು ಮೂಲತಃ ಕಾಶ್ಮೀರಿ ಪಂಡಿತರಾದ ನಟ ಅನುಪಮ ಖೇರ್ ಪ್ರತಿಕ್ರಿಯಿಸಿದ್ದಾರೆ.
ಭಯೋತ್ಪಾದಕ ಸುದ್ದಿಯನ್ನು ಕೇಳಿ ಹೃದಯ ಹಿಂಡಿದಂತಾಗಿದೆ. ಮುಗ್ಧ ಜನರ ಇಂತಹ ಹತ್ಯೆ ಅಕ್ಷರಶಃ ರಾಕ್ಷಸೀಯ ಕೃತ್ಯ ಎಂದು ಚಲನಚಿತ್ರ ನಟ ಅಕ್ಷಯ ಕುಮಾರ ಪ್ರತಿಕ್ರಿಯಿಸಿದ್ದಾರೆ.
ಈ ಘಟನೆ ಹೃದಯ ವಿದ್ರಾವಕ ಮತ್ತು ಅಮಾನವೀಯ ಎಂದು ನಟ ಅಜಯ ದೇವಗನ ಹೇಳಿದ್ದಾರೆ. ನಟ ಸೋನು ಸೂದ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ‘ಇದು ಸಹಿಸಲಾಗದು’ ಎಂದು ಅವರು ಹೇಳಿದ್ದಾರೆ.
ವಿವಿಧ ಮರಾಠಿ ಚಿತ್ರರಂಗದ ಕಲಾವಿದರು ಸಹ ಈ ಘಟನೆಯನ್ನು ಖಂಡಿಸಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.