|
ಶ್ರೀನಗರ (ಜಮ್ಮು-ಕಾಶ್ಮೀರ) – ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕಾಶ್ಮೀರಿ ನಾಗರಿಕರು ಖಂಡಿಸಿದ್ದಾರೆ. ಪಹಲ್ಗಾಮ್ ಜನರು ಮೇಣದಬತ್ತಿ ಮೆರವಣಿಗೆ ನಡೆಸಿ ಈ ದಾಳಿಯನ್ನು ವಿರೋಧಿಸಿದರು, ಹಾಗೆಯೇ ಕಾಶ್ಮೀರದಲ್ಲಿ ಹಲವು ಕಡೆ ಬಂದ್ ಆಚರಿಸಲಾಯಿತು. ಅನೇಕ ಮಸೀದಿಗಳಲ್ಲಿ ಈ ದಾಳಿಯನ್ನು ಖಂಡಿಸಲಾಯಿತು. ‘ಈ ದಾಳಿಯು ಇಸ್ಲಾಂ ಮತ್ತು ಮಾನವೀಯತೆಗೆ ವಿರುದ್ಧವಾಗಿದೆ. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಮತ್ತು ಈ ದಾಳಿಯು ಕಾಶ್ಮೀರದ ಶಾಂತಿ ಮತ್ತು ಏಕತೆಯನ್ನು ನಾಶಪಡಿಸುವ ಸಂಚು’ ಎಂದು ಮಸೀದಿಗಳಲ್ಲಿ ಹೇಳಲಾಯಿತು.
Muslims Protest against the #PahalgamTerroristAttack in Kashmir!
“All mosque & Imam pay tribute to martyrs”, says Chief Imam Ahmed Ilyasi on Pahalgam
Former CM and PDP chief Mehbooba Mufti leads a protest march in Lal Chowk
Protesters take out candle marches.
It’s crucial… pic.twitter.com/HAXQhooUn3
— Sanatan Prabhat (@SanatanPrabhat) April 23, 2025
1. ‘ಕಾಶ್ಮೀರ ನಮ್ಮ ಮನೆ ಮತ್ತು ನಾವು ಅದನ್ನು ಭಯೋತ್ಪಾದಕರ ಕೈಗೆ ಹೋಗಲು ಬಿಡುವುದಿಲ್ಲ’ ಎಂದು ಮಸೀದಿಗಳಲ್ಲಿ ಘೋಷಣೆಗಳನ್ನು ಕೂಗಲಾಯಿತು. ‘ಹೇಡಿಗಳಂತೆ ದಾಳಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಹ ಒತ್ತಾಯಿಸಲಾಯಿತು.
2. ಕಿಶ್ತವಾಡ ಮಸೀದಿಯಿಂದ ಹೇಳಿಕೆ ನೀಡಲಾಗಿದ್ದು, ‘ಪಹಲ್ಗಾಮ್ ದಾಳಿಯನ್ನು ಇಡೀ ಇಸ್ಲಾಮಿ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಮತ್ತು ಸರಕಾರದಿಂದ ತನಿಖೆಯನ್ನು ಒತ್ತಾಯಿಸುತ್ತದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು’ ಎಂದು ಹೇಳಿದೆ. ಈ ದಾಳಿಯ ಖಂಡನೆಯ ಅಂಗವಾಗಿ ಏಪ್ರಿಲ್ 23 ರಂದು ಕಿಶ್ತವಾಡನಲ್ಲಿ ಬಂದ್ ಆಚರಿಸಲಾಯಿತು.
3. ಬಾರಾಮುಲ್ಲಾ ಮತ್ತು ಶ್ರೀನಗರದಲ್ಲಿ ಸ್ಥಳೀಯ ಜನರು ಮೇಣದಬತ್ತಿ ಮೆರವಣಿಗೆ ನಡೆಸಿ ದಾಳಿಯನ್ನು ಖಂಡಿಸಿದರು. ಶ್ರೀನಗರದ ಜನನಿಬಿಡ ಪ್ರದೇಶವಾಗಿದ್ದ ಲಾಲ್ ಚೌಕ್ ದಾಳಿಯ ಘಟನೆಯ ನಂತರ ಸಂಪೂರ್ಣವಾಗಿ ಖಾಲಿಯಾಗಿತ್ತು. ಜಮ್ಮುವಿನ ಕತ್ರಾದಲ್ಲಿಯೂ ಬಂದ್ ಆಚರಿಸಲಾಯಿತು, ಇದರಿಂದ ಶ್ರೀ ವೈಷ್ಣೋದೇವಿ ದರ್ಶನಕ್ಕೆ ಬಂದ ಭಕ್ತರಿಗೆ ತೊಂದರೆ ಎದುರಿಸಬೇಕಾಯಿತು.
ಪಂಜಾಬ್ನಲ್ಲೂ ಮುಸಲ್ಮಾನರಿಂದ ಖಂಡನೆ!
ಪಂಜಾಬಿನ ಲೂಧಿಯಾನದಲ್ಲಿ ಪಹಲ್ಗಾಮ್ ದಾಳಿಯನ್ನು ಮುಸಲ್ಮಾನರು ಖಂಡಿಸಿದರು. ಅಲ್ಲಿನ ಜಾಮಾ ಮಸೀದಿಯ ಹೊರಗೆ ಭಯೋತ್ಪಾದಕರ ಪ್ರತಿಕೃತಿಗಳನ್ನು ದಹಿಸಿದರು. ಈ ಬಗ್ಗೆ ಮುಸ್ಲಿಂ ನಾಯಕ ಮಹಮ್ಮದ್ ಮುಸ್ತಕಿಮ್ ಮಾತನಾಡಿ ಕಾಶ್ಮೀರದಲ್ಲಿ ಭಯೋತ್ಪಾದಕರು ನಿರಾಯುಧ ಜನರ ಮೇಲೆ ನಡೆಸಿದ ದಾಳಿ ಖಂಡನೀಯವಾಗಿದೆ. ಇಡೀ ಮುಸ್ಲಿಂ ಸಮಾಜವು ಇದನ್ನು ವಿರೋಧಿಸುತ್ತದೆ ಎಂದು ಮುಸ್ಲಿಂ ನಾಯಕರು ಹೇಳಿದರು.
ಸಂಪಾದಕೀಯ ನಿಲುವು
|