MNS Chief Raj Thackeray : ಭಯೋತ್ಪಾದಕರನ್ನು ಮಟ್ಟಹಾಕಿ, ಅವರ ಮುಂದಿನ 10 ತಲೆಮಾರುಗಳವರೆಗೂ ನಡುಗುವಂತೆ ಮಾಡಿ! – ರಾಜ್ ಠಾಕ್ರೆ, ಅಧ್ಯಕ್ಷರು, ಮಹಾರಾಷ್ಟ್ರ ನವನಿರ್ಮಾಣ ಸೇನೆ

ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ

ಮುಂಬಯಿ – 1972 ರಲ್ಲಿ ಮ್ಯೂನಿಚ್ ಒಲಿಂಪಿಕ್‌ನಲ್ಲಿ ಇಸ್ರೇಲ್‌ನ ಕ್ರೀಡಾಪಟುಗಳ ಮೇಲೆ ಪ್ಯಾಲೆಸ್ತೀನ್ ಭಯೋತ್ಪಾದಕರು ದಾಳಿ ನಡೆಸಿದಾಗ, ಇಸ್ರೇಲ್ ದೇಶವು ಭಯೋತ್ಪಾದಕರು ಮತ್ತು ಅವರ ಸೂತ್ರಧಾರರನ್ನು ನಿರ್ನಾಮ ಮಾಡಿದ ರೀತಿಯಿಂದ ಪ್ಯಾಲೆಸ್ತೀನ್ ಜನರ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಭಯ ಹುಟ್ಟಿತು. ಅದೇ ರೀತಿ ಕೇಂದ್ರ ಸರಕಾರವು ಇಸ್ರೇಲ್ ನಂತೆ ಅನುಸರಿಸಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಶಾಶ್ವತವಾಗಿ ನಿರ್ನಾಮ ಮಾಡಬೇಕು. ಭಯೋತ್ಪಾದಕರ ಮಟ್ಟ ಹಾಕಿ, ಮುಂದಿನ 10 ತಲೆಮಾರುಗಳವರೆಗೂ ನಡುಗುವಂತೆ ಮಾಡಿ ಎಂದು ಮನಸೇ ಅಧ್ಯಕ್ಷ ರಾಜ್ ಠಾಕ್ರೆ ಕೇಂದ್ರ ಸರಕಾರಕ್ಕೆ ‘ಎಕ್ಸ್’ ಖಾತೆಯ ಮೂಲಕ ಕರೆ ನೀಡಿದ್ದಾರೆ.

ಈ ಕರೆಯಲ್ಲಿ ರಾಜ್ ಠಾಕ್ರೆ ಅವರು, ಭಯೋತ್ಪಾದಕರು ದಾಳಿ ಮಾಡುವಾಗ ಎದುರಿಗಿನವರ ಧರ್ಮವನ್ನು ಕೇಳಿದ್ದಾರೆ. ಇದು ಅವರ ದುರಹಂಕಾರ. ‘ಈ ದೇಶದಲ್ಲಿ ನಮ್ಮ ಹಿಂದೂಗಳ ಮೇಲೆ ಯಾರಾದರೂ ಬಂದಲ್ಲಿ, ನಾವೆಲ್ಲಾ ಹಿಂದೂಗಳಾಗಿ ಒಗ್ಗೂಡಿ ನಿಮ್ಮ ಮೇಲೆ ದಾಳಿ ಮಾಡುತ್ತೇವೆ’ ಎಂದು ನಾನು ಅನೇಕ ಬಾರಿ ಭಾಷಣದಲ್ಲಿ ಹೇಳಿದ್ದೇನೆ. ಈ ಭಯೋತ್ಪಾದಕರ ಹಿಂದಿನ ಸೂತ್ರಧಾರರು ಎಲ್ಲಿಯೇ ಅಡಗಿಕೊಂಡಿದ್ದರೂ, ನಮ್ಮ ಶಕ್ತಿ ಏನೆಂದು ಅವರಿಗೆ ತಿಳಿಯಲೇಬೇಕು. ಕೇಂದ್ರ ಸರಕಾರವು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಮತ್ತು ಈ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಅವರ ಬೆಂಬಲಕ್ಕೆ ನಿಲ್ಲುತ್ತವೆ. ಸರಕಾರವು ಒಂದೇ ಸಲಕ್ಕೆ ಸರಿಯಾದ ಹೊಡೆತ ನೀಡಬೇಕು. ಮಹಾರಾಷ್ಟ್ರ ನವನಿರ್ಮಾಣ ಸೇನೆ ಖಂಡಿತವಾಗಿಯೂ ಸರಕಾರದೊಂದಿಗೆ ಇರುತ್ತದೆ, ಎಂದು ಹೇಳಿದರು.