‘ಕಲ್ಮಾ’ ಹೇಳಲು ಒತ್ತಾಯಿಸಿ ಹಿಂದೂಗಳ ಹತ್ಯೆ !

  • ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ೨೮ ಮಂದಿ ಸಾವು, ೨೦ ಮಂದಿಗೆ ಗಾಯ

  • ಮೃತರ ಪೈಕಿ ಮಹಾರಾಷ್ಟ್ರದ ೬ ಮಂದಿ ಹಾಗೂ ಕರ್ನಾಟಕದ 2 ವ್ಯಕ್ತಿಗಳು ಸೇರಿದ್ದಾರೆ

  • ನೌಕಾಪಡೆಯ ಅಧಿಕಾರಿ, ಗುಪ್ತಚರ ಇಲಾಖೆಯ ಅಧಿಕಾರಿಯೂ ಸೇರಿದ್ದಾರೆ

  • ಕೇವಲ ಪುರುಷರನ್ನು ಮಾತ್ರ ಗುರಿಯಾಗಿಸಲಾಯಿತು

(‘ಕಲ್ಮಾ’ ಎಂದರೆ ಅಲ್ಲಾಹನ ವೈಭವವನ್ನು ಕೊಂಡಾಡುವ ಹೇಳಿಕೆಗಳು)

ಪಹಲ್ಗಾಮ್ (ಜಮ್ಮು-ಕಾಶ್ಮೀರ) – ಏಪ್ರಿಲ್ ೨೨ರಂದು ಮಧ್ಯಾಹ್ನ ನಡೆದ ಜಿಹಾದಿ ಭಯೋತ್ಪಾದಕ ದಾಳಿಯಲ್ಲಿ ಈವರೆಗೆ ೨೮ ಜನರು ಮೃತಪಟ್ಟಿದ್ದಾರೆ ಮತ್ತು ೨೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರಕಾರದಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಪ್ರವಾಸಿಗರ ಮೇಲೆ ಗುಂಡು ಹಾರಿಸುವ ಮೊದಲು ಜಿಹಾದಿ ಭಯೋತ್ಪಾದಕರು ಅವರ ಹೆಸರುಗಳನ್ನು ಕೇಳಿದರು, ಕೆಲವರ ಬಟ್ಟೆಗಳನ್ನು ತೆಗೆದು ಅವರ ಧರ್ಮವನ್ನು ಪರೀಕ್ಷಿಸಿ ಗುಂಡು ಹಾರಿಸಿದರು. ಕೆಲವರನ್ನು ಕೊಲ್ಲುವ ಮೊದಲು ‘ಕಲ್ಮಾ’ ಹೇಳುವಂತೆ ಒತ್ತಾಯಿಸಲಾಯಿತು. ಉತ್ತರ ಪ್ರದೇಶದ ಶುಭಂ ದ್ವಿವೇದಿ ಎಂಬುವವರ ಹೆಸರನ್ನು ಕೇಳಿದ ಕೂಡಲೇ ಅವರ ತಲೆಗೆ ಗುಂಡು ಹಾರಿಸಿ ಕೊಲ್ಲಲಾಯಿತು. ಮೃತರಲ್ಲಿ ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಒಡಿಶಾ ರಾಜ್ಯಗಳ ಪ್ರವಾಸಿಗರು ಸೇರಿದ್ದಾರೆ. ಇದರೊಂದಿಗೆ ನೇಪಾಳ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ತಲಾ ಒಬ್ಬ ಪ್ರವಾಸಿಗರಿದ್ದಾರೆ. ಈ ದಾಳಿಯಲ್ಲಿ ೨ ಸ್ಥಳೀಯ ನಾಗರಿಕರು ಕೂಡ ಮೃತಪಟ್ಟಿದ್ದಾರೆ. ಮೃತರ ಪೈಕಿ ನೌಕಾಪಡೆಯ ಅಧಿಕಾರಿಯೊಬ್ಬರು ಹಾಗೂ ಬಿಹಾರದ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಸೇರಿದ್ದಾರೆ. ವಿಶೇಷವೆಂದರೆ, ಭಯೋತ್ಪಾದಕರು ಈ ದಾಳಿಯಲ್ಲಿ ಕೇವಲ ಪುರುಷರನ್ನು ಮಾತ್ರ ಗುರಿಯಾಗಿಸಿದರು. ಉಗ್ರರು ಮಹಿಳೆಯರ ಮೇಲೆ ಗುಂಡು ಹಾರಿಸಲಿಲ್ಲ.

ವಿದೇಶ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ!

ಈ ದಾಳಿಯ ನಂತರ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಮರಳಿದರು. ಅವರು ಭಾರತಕ್ಕೆ ಮರಳಿದ ಕೂಡಲೇ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಈ ಸಭೆಯಲ್ಲಿ ಗುಪ್ತಚರ ಇಲಾಖೆಯ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮುಂತಾದವರು ಉಪಸ್ಥಿತರಿದ್ದರು.

ಮೃತರ ಕುಟುಂಬಗಳಿಗೆ ತಲಾ ೧೦ ಲಕ್ಷ ರೂಪಾಯಿ ಪರಿಹಾರ

ಈ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಜಮ್ಮು-ಕಾಶ್ಮೀರ ಸರಕಾರವು ತಲಾ ೧೦ ಲಕ್ಷ ರೂಪಾಯಿ ಸಹಾಯಧನವನ್ನು ಘೋಷಿಸಿದೆ. ಇದರೊಂದಿಗೆ ಗಂಭೀರವಾಗಿ ಗಾಯಗೊಂಡವರಿಗೆ ೨ ಲಕ್ಷ ಮತ್ತು ಸಣ್ಣ-ಪುಟ್ಟ ಗಾಯಗಳಾದವರಿಗೆ ೧ ಲಕ್ಷ ರೂಪಾಯಿ ನೀಡಲಾಗುವುದು ಎಂದು ಹೇಳಿದೆ.

ನಮ್ಮ ಧರ್ಮಕ್ಕೆ ಮೋದಿ ಅವರಿಂದ ಅಪಾಯವಿದೆ! – ಭಯೋತ್ಪಾದಕ

ಪುಣೆಯ ಸಂತ್ರಸ್ತ ಪ್ರವಾಸಿ ಆಸಾವರಿ ಜಗದಾಳೆ ಎಂಬವರು ದಾಳಿಯ ಮಾಹಿತಿಯನ್ನು ನೀಡುತ್ತಾ, ಗುಂಡಿನ ದಾಳಿಯ ನಂತರ ನಾವು ಭಯದಿಂದ ಗುಡಾರಕ್ಕೆ ಸೇರಿಕೊಂಡೆವು. ಭಯೋತ್ಪಾದಕರು ನನ್ನ ೫೪ ವರ್ಷದ ತಂದೆಯನ್ನು ಹೊರಗೆ ಕರೆದು ಕುರಾನ್‌ನ ಸಾಲುಗಳನ್ನು (ಕಲ್ಮಾ) ಹೇಳುವಂತೆ ಒತ್ತಾಯಿಸಿದರು. ಅವರು ಅದನ್ನು ಹೇಳದ ಕಾರಣ ಭಯೋತ್ಪಾದಕರು ಅವರ ತಲೆ, ಬೆನ್ನು ಮತ್ತು ಕಿವಿಗೆ ಗುಂಡು ಹಾರಿಸಿದರು. ಹಾಗೆಯೇ, ‘ನೀವು ಮೋದಿಯನ್ನು ತಲೆ ಮೇಲೆ ಕೂರಿಸಿಕೊಂಡಿದ್ದೀರಿ, ಅದರಿಂದ ನಮ್ಮ ಧರ್ಮಕ್ಕೆ ಅಪಾಯವಿದೆ’ ಎಂದು ಉಗ್ರರು ಹೇಳಿದರು. ದಾಳಿಗೈದ ಭಯೋತ್ಪಾದಕರು ಸ್ಥಳೀಯ ಪೊಲೀಸರ ಬಟ್ಟೆಯನ್ನು ಧರಿಸಿದ್ದರು. ‘ಕಾಶ್ಮೀರಿ ಭಯೋತ್ಪಾದಕರು ನಿರಪರಾಧಿ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದಿಲ್ಲ’ ಎಂದು ಅವರು ಪ್ರತಿಪಾದಿಸಿದರು. ಅವರು ಅನೇಕ ಪುರುಷರಿಗೆ ಗುಂಡು ಹಾರಿಸಿ ಕೊಲೆ ಮಾಡಿದರು. ನಮ್ಮ ಸಹಾಯಕ್ಕಾಗಿ ಯಾರೂ ಅಲ್ಲಿರಲಿಲ್ಲ. ಪೊಲೀಸರು ಮತ್ತು ಸೈನಿಕರು ೨೦ ನಿಮಿಷಗಳ ನಂತರ ಸಹಾಯಕ್ಕೆ ಬಂದರು.

ಭಯೋತ್ಪಾದಕರು ಕೆಲವು ಹಿಂದೂಗಳಿಗೆ ‘ಅಲ್ಲಾಹು ಅಕ್ಬರ್’ (ಅಲ್ಲಾ ದೊಡ್ಡವನು) ಎಂದು ಹೇಳಲು ಹೇಳಿದರು. ಅವರು ಹೇಳದ ಕಾರಣ ಆ ಹಿಂದೂಗಳಿಗೆ ಗುಂಡು ಹಾರಿಸಿ ಹತ್ಯೆಗೈದರು. ಕೆಲವರ ಆಧಾರ್ ಕಾರ್ಡ್ ಪರಿಶೀಲಿಸಿ ಅವರನ್ನು ಕೊಂದಿದ್ದಾರೆ ಎಂದೂ ಸಹ ಸಂತ್ರಸ್ತರು ಮಾಹಿತಿ ನೀಡಿದ್ದಾರೆ.

೪ ಭಯೋತ್ಪಾದಕರಲ್ಲಿ ೨ ಪಾಕಿಸ್ತಾನಿಗಳು!

ಈ ಭಯೋತ್ಪಾದಕ ದಾಳಿಯಲ್ಲಿ ಒಟ್ಟು ೪ ಭಯೋತ್ಪಾದಕರು ಭಾಗಿಯಾಗಿದ್ದರು ಮತ್ತು ಅವರಲ್ಲಿ ೨ ಜನರು ಪಾಕಿಸ್ತಾನದವರಾಗಿದ್ದರು. ಈ ನಾಲ್ವರು ಉಗ್ರರು ಒಟ್ಟಿಗೆ ಇರುವ ಛಾಯಾಚಿತ್ರವೊಂದು ಲಭ್ಯವಾಗಿದೆ. ಈ ಛಾಯಾಚಿತ್ರದ ಆಧಾರದ ಮೇಲೆ ತನಿಖಾ ಸಂಸ್ಥೆಗಳು ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿವೆ.

ಭಾರತ ಭಯೋತ್ಪಾದನೆಗೆ ಮಣಿಯುವುದಿಲ್ಲ! – ಕೇಂದ್ರ ಸಚಿವ ಅಮಿತ್ ಶಹಾ

ಪಹಲ್ಗಾಮ್ ನ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ನಾನು ಭಾರವಾದ ಹೃದಯದಿಂದ ಸಂತಾಪಗಳನ್ನು ಅರ್ಪಿಸುತ್ತೇನೆ. ಭಾರತ ಭಯೋತ್ಪಾದನೆಗೆ ಮಣಿಯುವುದಿಲ್ಲ. ಈ ಕ್ರೂರ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಪ್ರತಿಕ್ರಿಯಿಸಿದ್ದಾರೆ. ಪಹಲ್ಗಾಮ್ ನ ದಾಳಿಯಲ್ಲಿ ಮೃತಪಟ್ಟವರ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಅವರು ಮಾತನಾಡಿದರು. ಅಮಿತ್ ಶಹಾ ಅವರು ಬೈಸರನ್‌ನಲ್ಲಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದರು.

ಸಂಪಾದಕೀಯ ನಿಲುವು

  • ಜಾತಿ-ಜಾತಿಗಳ ನಡುವೆ ಕಚ್ಚಾಡುತ್ತಿರುವ ಹಿಂದೂಗಳಿಗೆ ಜಿಹಾದಿ ಭಯೋತ್ಪಾದಕರು ಯಾದವ, ಮರಾಠ, ದಲಿತ ಮುಂತಾದ ಜಾತಿಗಳನ್ನು ಪರಿಗಣಿಸದೆ ‘ಹಿಂದೂ’ ಎಂದು ಕೊಂದಿರುವುದು ಅರ್ಥವಾಗುತ್ತದೆಯೇ? ಈ ಭಯೋತ್ಪಾದನೆಯ ವಿರುದ್ಧ ಅವರು ‘ಹಿಂದೂ’ಗಳಾಗಿ ಹೋರಾಡುವರೇ? ಕೇವಲ ಭಯೋತ್ಪಾದನೆ ಮಾತ್ರವಲ್ಲ, ದೇಶದ ಜಿಹಾದಿ ಮುಸಲ್ಮಾನರ ವಿರುದ್ಧವೂ ಹೋರಾಡುವರೇ?
  • ಈ ಬಗ್ಗೆ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್, ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಮುಂತಾದ ಮುಸ್ಲಿಂ ಪರ ಜಾತ್ಯತೀತ ಪಕ್ಷಗಳು ಬಾಯಿ ಮುಚ್ಚಿಕೊಂಡು ಕುಳಿತಿವೆ ಎಂಬುದನ್ನು ಹಿಂದೂಗಳು ಗಮನಿಸಿ ಅವರನ್ನು ಪ್ರಶ್ನಿಸಬೇಕು!