ರಾಬರ್ಟ್ ವಾಡ್ರಾ ಅವರ ‘ವಿಚಿತ್ರ ಸಂಶೋಧನೆ’

ನವದೆಹಲಿ – ಪಹಲಗಾಮ್ ನಲ್ಲಿ ನಡೆದ ದಾಳಿಯಿಂದ ನನಗೆ ಬಹಳ ದುಃಖವಾಗಿದೆ. ನಮ್ಮ ದೇಶದ ಈ ಸರಕಾರ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಅದರಿಂದ ಅಲ್ಪಸಂಖ್ಯಾತರು ಅಸುರಕ್ಷಿತ ಭಾವನೆ ಅನುಭವಿಸುತ್ತಿದ್ದಾರೆ. ಆಕ್ರಮಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಯೋತ್ಪಾದಕರು ದಾಳಿ ಮಾಡುವಾಗ ಜನರ ಗುರುತು ಪರಿಶೀಲಿಸುತ್ತಿದ್ದರು ಎಂದು ನಿಮಗೆ ತಿಳಿಯುತ್ತದೆ. ಅವರು ಹಾಗೆ ಏಕೆ ಮಾಡುತ್ತಿರಬಹುದು ? ಏಕೆಂದರೆ ನಮ್ಮ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರೆಂದು ಒಡಕು ಮೂಡಿಸಲಾಗಿದೆ ಎಂದು ಸೋನಿಯಾ ಗಾಂಧಿಯವರ ಅಳಿಯ ಮತ್ತು ಪ್ರಿಯಾಂಕಾ ವಾಡ್ರಾ ಅವರ ಪತಿ ರಾಬರ್ಟ್ ವಾಡ್ರಾ ಅಭಿಪ್ರಾಯಪಟ್ಟಿದ್ದಾರೆ. ಅವರು ‘ಎ.ಎನ್.ಐ.’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದರು.
ವಾಡ್ರಾ ಮಾತು ಮುಂದುವರೆಸಿ, ಹಿಂದೂ ಮತ್ತು ಮುಸ್ಲಿಮರ ನಡುವೆ ಬಿರುಕು ನಿರ್ಮಾಣವಾಗಿರುವುದರಿಂದ ಭಾರತದಲ್ಲಿ ಹಿಂದೂಗಳಿಂದ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ಈ ಭಯೋತ್ಪಾದಕ ಸಂಘಟನೆಗಳು ಭಾವಿಸುತ್ತವೆ ಎಂದರು. (ಹೀಗೆ ಭಯೋತ್ಪಾದಕರಿಗೆ ಅನ್ನಿಸುವುದಿಲ್ಲ, ಆದರೆ ಕಾಂಗ್ರೆಸ್ ಸೇರಿದಂತೆ ದೇಶದ ಹೆಚ್ಚಿನ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಓಲೈಸಿ ಅವರ ಮತ ಪಡೆಯಲು ಅವರಿಂದ ಹೇಳಿಸುತ್ತವೆ ! ಹಾಗೂ ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿ ನಡೆದಾಗ ಮೌನವಾಗಿರುತ್ತಾರೆ ! – ಸಂಪಾದಕರು) ಭಯೋತ್ಪಾದಕರು ಜನರ ಗುರುತು ಪರಿಶೀಲಿಸಿ ನಂತರ ಅವರ ಮೇಲೆ ದಾಳಿ ಮಾಡಿದರು. ಇಂತಹ ಕೃತ್ಯಗಳನ್ನು ಮಾಡುವ ಮೂಲಕ ಭಯೋತ್ಪಾದಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂದೇಶ ನೀಡಿದ್ದಾರೆ. ನಮ್ಮ ದೇಶದಲ್ಲಿ ನಾವು ಸುರಕ್ಷಿತ ಮತ್ತು ಜಾತ್ಯತೀತರಾಗಿದ್ದೇವೆಂದು ಕಾಣಿಸಬೇಕು. ಹೀಗಾದಲ್ಲಿ ಪಹಲ್ಗಾಮ್ ನಲ್ಲಿ ನಡೆದ ಘಟನೆಯಂತೆ ದೇಶದಲ್ಲಿ ಬೇರೆಡೆ ಘಟನೆಗಳು ನಡೆಯುವುದಿಲ್ಲ, ಎಂದು ಹೇಳಿದರು.
ಸಂಪಾದಕೀಯ ನಿಲುವು
|