
ಮುಂಬಯಿ – ಜಮ್ಮು-ಕಾಶ್ಮೀರದ ಪಹಲಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಹಾರಾಷ್ಟ್ರದ 6 ನಾಗರಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಡೊಂಬಿವಿಲಿಯ 3, ಪುಣೆಯ 2 ಮತ್ತು ಪನ್ವೇಲ್ 1 ನಾಗರಿಕರು ಸೇರಿದ್ದಾರೆ. ಮೃತ ನಾಗರಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಮಹಾರಾಷ್ಟ್ರದ ಕೆಲವು ಪ್ರವಾಸಿಗರು ಇನ್ನೂ ಜಮ್ಮು-ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಕರೆತರಲಾಗುವುದು ಎಂದು ದೇವೇಂದ್ರ ಫಡಣವೀಸ ಹೇಳಿದರು.
ಈ ದಾಳಿಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಜಮ್ಮು-ಕಾಶ್ಮೀರದಲ್ಲಿ ಸಿಲುಕಿರುವ ಮಹಾರಾಷ್ಟ್ರದ ಪ್ರವಾಸಿಗರನ್ನು ಕರೆತರಲು ವಿಶೇಷ ವಿಮಾನವನ್ನು ಕಳುಹಿಸಲಾಗುವುದು. ಅದರ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ, ಎಂದು ಹೇಳಿದರು.
ಸಹಾಯಕ್ಕಾಗಿ ಸಚಿವಾಲಯದಲ್ಲಿ ಅಧಿಕಾರಿಗಳ ನೇಮಕ!
ಪಹಲಗಾಮ್ ನಲ್ಲಿ ನಡೆದ ದಾಳಿಯಲ್ಲಿ ಮಹಾರಾಷ್ಟ್ರದ ಸಂತ್ರಸ್ತ ನಾಗರಿಕರಿಗೆ ಸಹಾಯ ಮಾಡಲು ಸಚಿವಾಲಯದ ರಾಜ್ಯ ತುರ್ತು ಕಾರ್ಯ ಕೇಂದ್ರದಲ್ಲಿ 2 ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ನಿರ್ದೇಶಕ ಸತೀಶಕುಮಾರ ಖಡ್ಕೆ ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯ ಕೇಂದ್ರದ ವ್ಯವಸ್ಥಾಪಕ ವಿಶೇಷಕರ ಸೂರ್ಯವಂಶಿ ಮತ್ತು ಕೊಠಡಿ ಅಧಿಕಾರಿ ನಿತಿನ ಮಸಳೆ ಅವರನ್ನು ಇದಕ್ಕಾಗಿ ನೇಮಿಸಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ನಾಗರಿಕರಿಗೆ ಅಥವಾ ಅವರ ಸಂಬಂಧಿಕರಿಗೆ ಸಹಾಯ ಮಾಡಲು ಸಚಿವಾಲಯದ ನಿಯಂತ್ರಣ ಕೊಠಡಿಯಲ್ಲಿ (022) 22027990/22794229 ಈ ದೂರವಾಣಿ ಸಂಖ್ಯೆಗಳು, 9321587143 ಈ ವಾಟ್ಸ್ ಆಪ್ ಸಂಖ್ಯೆ ಮತ್ತು 1070 ಈ ಟೋಲ್ ಫ್ರೀ ಸಂಖ್ಯೆಯನ್ನು ಒದಗಿಸಲಾಗಿದೆ.