|

ಮುಂಬೈ – ನಟಿ ರವೀನಾ ಟಂಡನ್ ಅವರ ಮನೆಯ ಹೊರಗೆ ಒಂದು ಕಾರ್ಯಕ್ರಮಕ್ಕೆ ಬುರ್ಖಾ ಧರಿಸಿದ ಮಹಿಳೆ ಬಂದಿದ್ದರು. ರವೀನಾ ಟಂಡನ್ ಮಹಿಳೆಯ ಕಡೆಯಿಂದ ಊಹಿಸಿ ಕಾರನ್ನು ನಿಧಾನವಾಗಿ ಮುಂದಕ್ಕೆ ಸರಿಸಿದರು. ಆದರೂ ಮುಸ್ಲಿಮರ ಗುಂಪೊಂದು ರವೀನಾ ಟಂಡನ್ ಅವರನ್ನು ಸುತ್ತುವರೆದು ಆಕೆಯ ಮೇಲೆ ‘ವೃದ್ಧೆಯ ಮೇಲೆ ವಾಹನ ಹತ್ತಿಸಲಾಯಿತು’ ಎಂದು ಹೇಳಿ ಹಲ್ಲೆ ನಡೆಸಿತು, ಆದರೆ ವಾಸ್ತವದಲ್ಲಿ ರವೀನಾ ಟಂಡನ್ ಮೇಲೆ ಮುಸ್ಲಿಂ ಗುಂಪು ದಾಳಿ ನಡೆಸಿ ‘ನನ್ನನ್ನು ಹೊಡೆಯದಿರಿ’ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರವೀನಾ ಕಾಣಿಸಿಕೊಂಡಿದ್ದಾರೆ.

ವರದಿಗಾರ ಮೊಹ್ಸಿನ್ ಶೇಖ್, ಸಂಬಂಧಪಟ್ಟ ವೃದ್ಧೆಯ ಮಗನ ನಕಲಿ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅಹ್ಮದ್ ಎಂಬ ವ್ಯಕ್ತಿಯು, ”ರವೀನಾ ಟಂಡನ್ ಅವರ ಕಾರು ನನ್ನ ತಾಯಿಗೆ ಡಿಕ್ಕಿ ಹೊಡೆದಿದೆ. ಆ ವೇಳೆ ಕುಡಿದಿದ್ದರು ಹಾಗೂ ನನ್ನ ತಾಯಿಗೆ ಹೊಡೆದಿದ್ದಾಳೆ. ಪರಿಣಾಮ ತಾಯಿಯ ತಲೆಗೆ ಪೆಟ್ಟಾಗಿದೆ. ಖಾರ್ ಪೊಲೀಸ್ ಠಾಣೆಯಲ್ಲಿ 4 ಗಂಟೆ ಕಳೆದರೂ ಯಾರೂ ನಮ್ಮ ದೂರು ದಾಖಲಿಸಿಲ್ಲ. ರಾಜಿ ಮಾಡಿಕೊಳ್ಳಲು ನಮ್ಮನ್ನು ಕೇಳಲಾಗುತ್ತಿದೆ.” ಎಂದು ಹೇಳುತ್ತಿರುವುದು ಕಾಣಿಸುತ್ತದೆ.
ಮುಂಬಯಿನಲ್ಲಿ ಇಂತಹ ಗ್ಯಾಂಗ್ಗಳು ಕೆಲಸ ಮಾಡುತ್ತಿವೆ ! – ಜನರ ಪ್ರತಿಕ್ರಿಯೆಗಳು‘ಎಕ್ಸ್’ ನಲ್ಲಿ ಸಿನ್ಹಾ ಪೋಸ್ಟ್ ಮಾಡಿದ ಸಂಬಂಧಿತ ವೀಡಿಯೊ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ‘ಮುಂಬಯಿನಲ್ಲಿ ಇಂತಹ ಗ್ಯಾಂಗ್ಗಳು ಕಾರ್ಯನಿರ್ವಹಿಸುತ್ತಿವೆ’, ‘ಈ ‘ಶಾಂತಿದೂತರ’ ಗುಂಪು ಅಕ್ಷರಶಃ ಅವಳನ್ನು ಕೊಲ್ಲುತ್ತಿದ್ದಾರೆ’, ‘ಈ ಶಾಂತಿದೂತರು ಎಲ್ಲೆಡೆ ಸಮಸ್ಯೆ ಸೃಷ್ಟಿಸುತ್ತಾರೆ’, ‘ಸೆಲೆಬ್ರಿಟಿಗಳಿಗೆ ಹೀಗಾದರೆ, ಸಾಮಾನ್ಯ ಜನರಿಗೆ ಏನಾಗುತ್ತದೆ ?’ ಎಂದು ಹೇಳಿದ್ದಾರೆ. |
ಪರಿಶೀಲಿಸದೆ ತರಾತುರಿಯಲ್ಲಿ ಸುಳ್ಳು ಸುದ್ದಿ ಬಿತ್ತರಿಸಿದ ಸುದ್ದಿ ವಾಹಿನಿಗಳು !

ನಟಿ ರವೀನಾ ಟಂಡನ್ ಅವರ ಕಾರನ್ನು ಮುಸ್ಲಿಂ ಮುದುಕಿಗೆ ಸ್ಪರ್ಷವೂ ಆಗಿಲ್ಲ ಎಂಬುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿದೆ. ಈ ವಿಡಿಯೋ ಕೂಡ ಪ್ರಸಾರವಾಗಿದೆ. ಹೀಗಿದ್ದರೂ ಕೆಲವು ಸುದ್ದಿ ವಾಹಿನಿಗಳು ‘ರವೀನಾ ಟಂಡನ್ ಅವರ ವಾಹನ ವೃದ್ಧೆಗೆ ಡಿಕ್ಕಿ ಹೊಡೆದಿದೆ’ ಎಂದು ವರದಿ ಮಾಡಿವೆ. ಕಾರು ತುಂಬಾ ನಿಧಾನವಾಗಿದ್ದರೂ, ‘ರವೀನಾ ಈ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿದ್ದಾರೆ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಸಂಪಾದಕೀಯ ನಿಲುವುಯಾವ ರೀತಿಯಲ್ಲಿ ಹಿಂದೂಗಳಿಗೆ ಕಿರುಕುಳ ನೀಡಿ ಸಮಾಜದಲ್ಲಿ ದ್ವೇಷ ನಿರ್ಮಾಣ ಮಾಡುವ ಉದ್ದೇಶವನ್ನು ಮತಾಂಧರು ಹೊಂದಿರಲಿಲ್ಲವೇ ? ಈ ಬಗ್ಗೆ ಪೊಲೀಸರು ತನಿಖೆ ನಡೆಸುವರೇ ? |
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ