Clean Temples Campaign: ‘ಖಬರ್ ಹಲ್ಚಲ್ ‘ಜಾಲತಾಣದಿಂದ ಇಂದೋರನಲ್ಲಿ ‘ಸ್ವಚ್ಛ ಮಂದಿರ ಸಮೃದ್ಧ ಮಂದಿರ’ ಅಭಿಯಾನ !

  • ನಗರದಲ್ಲಿ ಎಲ್ಲೆಡೆ ಅಭಿಯಾನದ ಶ್ಲಾಘನೆ !

  • ಗಮನ ಸೆಳೆದ ಪ್ರಬೋಧನಾತ್ಮಕ ಫಲಕಗಳು

  • ಜಾಲತಾಣದ ಸಂಪಾದಕ ಡಾ. ಅಪರ್ಣ ಜೈನ್ ಇವರ ನೇತೃತ್ವ

ಇಂದೋರ ನಗರದಲ್ಲಿನ ವಿವಿಧ ದೇವಸ್ಥಾನದಲ್ಲಿ ಫಲಕಗಳನ್ನು ಹಾಕುತ್ತಿರುವ ಕಾರ್ಯಕರ್ತರು

ಇಂದೋರ (ಮಧ್ಯಪ್ರದೇಶ) – ದೇಶದಲ್ಲಿನ ಎಲ್ಲಾಕ್ಕಿಂತ ಸ್ವಚ್ಛ ನಗರ ಎಂದು ಬಹುಮಾನ ಪಡೆದಿರುವ ಇಂದೊರದಲ್ಲಿ ನಿಷ್ಪಕ್ಷ ಪತ್ರಿಕೋದ್ಯಮ ನಡೆಸುವ ‘ಖಬರ್ ಹಲ್ಚಲ್’ ಈ ಜಾಲತಾಣದಿಂದ ದೇವಸ್ಥಾನದ ಸ್ವಚ್ಛತೆಯ ಅಭಿಯಾನ ಕೈಗೆತ್ತಿಕೊಂಡಿತ್ತು. ಈ ದೃಷ್ಟಿಯಿಂದ ‘ಸ್ವಚ್ಛ ಮಂದಿರ ಸಮೃದ್ಧ ಮಂದಿರ’ ಅಭಿಯಾನ ಆರಂಭವಾಗಿದೆ. ಇದರ ಅಡಿಯಲ್ಲಿ ದೇವಸ್ಥಾನದ ಸ್ವಚ್ಛತೆ ಕಾಪಾಡುವಂತೆ ಕರೆ ನೀಡುವ ಫಲಕಗಳು ದೇವಸ್ಥಾನದಲ್ಲಿ ಹಾಕಲಾಗಿದೆ ಹಾಗೂ ದೇವಸ್ಥಾನ ಸ್ವಚ್ಛಗೊಳಿಸಲಾಗುತ್ತಿದೆ. ಈ ಅಭಿಯಾನದ ನಗರದಲ್ಲಿ ಎಲ್ಲೆಡೆ ಶ್ಲಾಘನೆ ಮಾಡಲಾಗುತ್ತಿದೆ.

‘ಖಬಾರ್ ಹಲ್ಚಲ್’ ಸಂಪಾದಕ ಡಾ. ಅಪರ್ಣ ಜೈನ್ ‘ಅವಿಚಲ’ ಇವರು ಮಾತನಾಡಿ, ಭಕ್ತರು ಧೂಪ ಮತ್ತು ಊದಿನಕಡ್ಡಿ ಪಾಕೆಟ್ ಹಾಗೂ ಹೂವುಗಳು ದೇವಸ್ಥಾನದಲ್ಲಿ ಎಲ್ಲೆಂದರೆ ಅಲ್ಲಿ ಬಿಸಾಡುತ್ತಾರೆ. ಕುಂಕುಮದ ಬೆರಳುಗಳನ್ನು ಗೋಡೆಗಳಿಗೆ ವರೆಸಿ ಗೋಡೆಗಳನ್ನು ಹಾಳು ಮಾಡುತ್ತಾರೆ. ಆದ್ದರಿಂದ ದೇವರ ಮನೆ ಅಸ್ವಚ್ಛವಾಗುತ್ತದೆ, ಆದ್ದರಿಂದ ದೇವಸ್ಥಾನದ ಪಾವಿತ್ಯ್ರೆಯನ್ನು ಕಾಪಾಡುವುದಕ್ಕಾಗಿ ‘ಸ್ವಚ್ಛ ಮಂದಿರ ಸಮೃದ್ಧ ಮಂದಿರ’ ಅಭಿಯಾನ ಆರಂಭಿಸಲಾಗಿದೆ.

‘ನಾನು ನಿಮ್ಮ ಮನೆ ಅಸ್ವಚ್ಚಗೊಳಿಸುತ್ತಿಲ್ಲ ಹಾಗಾದರೆ ನೀವು ನನ್ನ ಮನೆ ಏಕೆ ಅಸ್ವಚ್ಛಗೊಳಿಸುತ್ತೀರಾ ?’, ಇಂತಹ ವಿಷಯದ ಪ್ರಬೋಧನಾತ್ಮಕ ಫಲಕಗಳು ನಾವು ತಯಾರಿಸಿದ್ದು ಆ ಫಲಕಗಳನ್ನು ನಗರದಲ್ಲಿನ ವಿವಿಧ ದೇವಸ್ಥಾನದಲ್ಲಿ ಹಾಕಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ದೇವಸ್ಥಾನದ ಪಾವಿತ್ರ್ಯ ಕಾಪಾಡುವುದಕ್ಕಾಗಿ ನೇತೃತ್ವ ವಹಿಸಿ ಕೃತಿ ಮಾಡುವ ‘ಖಬರ್ ಹಲ್ಚಲ್’ ಸುದ್ಧಿ ಜಾಲತಾಣದ ಸಂಪಾದಕ ಡಾ. ಅಪರ್ಣ ಜೈನ್ ಇವರಿಗೆ ಅಭಿನಂದನೆಗಳು. ಈಗಿನ ಕಥಾಕಥಿತ ಜಾತ್ಯತೀತ ಪ್ರಸಾರಮಾಧ್ಯಮಗಳಲ್ಲಿ ಈ ರೀತಿ ಧರ್ಮಾಭಿಮಾನಿ ಜಾಲತಾಣ ಮತ್ತು ಸಂಪಾದಕರಿರುವುದು, ಇದು ಹಿಂದುಗಳಿಗೆ ಆಶೆಯ ಕಿರಣವಾಗಿದೆ !
  • ಹಿಂದುಗಳು ಇಂತಹ ಅಭಿಯಾನಗಳಲ್ಲಿ ನೇತೃತ್ವ ವಹಿಸಿ ಸ್ವತಃ ಸಹಭಾಗಿ ಆಗಬೇಕು ಮತ್ತು ಧರ್ಮರಕ್ಷಣೆಯ ಕಾರ್ಯಕ್ಕೆ ಕೈಜೋಡಿಸಬೇಕು !