ಹಿಂದುತ್ವವು ಮುಸಲ್ಮಾನ ಮತ್ತು ಕ್ರೈಸ್ತರನ್ನು ಖಳನಾಯಕನನ್ನಾಗಿ ಮಾಡುತ್ತೆ ! – ನಟ ಚೇತನ್

ಬೆಂಗಳೂರು – ಹಿಂದುತ್ವವು ಮುಸಲ್ಮಾನ ಮತ್ತು ಕ್ರೈಸ್ತರನ್ನು (ಧಾರ್ಮಿಕ ಅಲ್ಪಸಂಖ್ಯಾತರನ್ನು) ಖಳನಾಯಕನನ್ನಾಗಿ ಮಾಡುತ್ತದೆ. ದೋಷಪೂರಿತ ಕನ್ನಡ ಹೋರಾಟಗಾರರು ಮಾರ್ವಾಡಿ ಮತ್ತು ಸಿಂಧಿ ಜನಾಂಗಕ್ಕೆ ಖಳನಾಯಕನನ್ನಾಗಿ ಮಾಡುತ್ತಾರೆ. ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ದೋಷಪೂರಿತ ಜಾತಿ ವಿರೋಧಿ ಹೋರಾಟಗಾರರು ಬ್ರಾಹ್ಮಣರನ್ನು ಖಳನಾಯಕರನ್ನಾಗಿ ಮಾಡುತ್ತಾರೆ, ಎಂದು ನಟ ಚೇತನ ಇವರು ಹೇಳಿಕೆ ನೀಡಿದ್ದಾರೆ. ಅವರು ಮಾತು ಮುಂದುವರೆಸಿ, ಇದಕ್ಕಾಗಿ ನಾವು ಸಮಾನತಾವಾದಿಗಳು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯನ್ನು ಖಳನಾಯಕನನ್ನಾಗಿ ಮಾಡಬೇಕು. (ಸಮಾನತೆಯ ಸೋಂಗು ಹಾಕಿರುವ ನಟ ಚೇತನ್ ! – ಸಂಪಾದಕರು)

ಸಂಪಾದಕೀಯ ನಿಲುವು

ಹಾಗಿದ್ದರೆ, ಈ ಖಳನಾಯಕರನ್ನು ಹಿಂದುತ್ವನಿಷ್ಠರು ದೇಶದ ಹೊರಗೆ ಅಟ್ಟುತ್ತಿದ್ದರು ಅಥವಾ ಅವರ ಘರವಾಪಸಿ (ಹಿಂದೂ ಧರ್ಮದಲ್ಲಿ ಮರು ಪ್ರವೇಶ) ಮಾಡುತ್ತಿದ್ದರು. ವಾಸ್ತವದಲ್ಲಿ ಮಾತ್ರ ಇದರ ತದ್ವಿರುದ್ಧವಾಗಿದೆ. ಇಂದು ದೇಶದಲ್ಲಿನ ಹಿಂದುಗಳು ಅಸುರಕ್ಷಿತವಾಗಿದ್ದಾರೆ. ಆದ್ದರಿಂದ ನಟ ಚೇತನ್ ಇವರನ್ನು ತರಾಟೆಗೆ ತೆಗೆದುಕೊಳ್ಳಬೇಕು ಮತ್ತು ಸಂಪೂರ್ಣ ಹಿಂದೂ ಸಮಾಜದ ಕ್ಷಮೆ ಕೇಳಲು ಅನಿವಾರ್ಯ ಗೊಳಿಸಬೇಕು !