
ಕರ್ಣಾವತಿ (ಗುಜರಾತ) – ಗುಜರಾತ ಸರಕಾರದ ಆದೇಶದ ಮೇರೆಗೆ ಮೇ ೧೮ ರಿಂದ ರಾಜ್ಯದಲ್ಲಿ ಮದರಸಾಗಳ ಸರ್ಮಿಕ್ಷೆ ಆರಂಭವಾಗಿದೆ. ಕರ್ಣಾವತಿಯ ದರಿಯಾಪುರದಲ್ಲಿನ ಸುಲ್ತಾನ ಮೊಹಲ್ಲಾದಲ್ಲಿನ ಒಂದು ಮದರಸಾದ ಸಮೀಕ್ಷೆಯ ವೇಳೆ ಸಮೀಕ್ಷಾ ತಂಡದಲ್ಲಿನ ಆಚಾರ್ಯ ಸಂದೀಪ ಪಟೇಲ್ ಎಂಬ ಸಿಬ್ಬಂದಿಯ ಮೇಲೆ ೧೦ ಜನರ ಗುಂಪು ದಾಳಿ ನಡೆಸಿದೆ. ಪಟೇಲ್ ಅವರು ಸರಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಈ ದಾಳಿಯ ಬಳಿಕ ಅಲ್ಲಿ ೧೦೦ ಕ್ಕಿಂತಲೂ ಹೆಚ್ಚಿನ ಜನರು ಸೇರಿ ಅವರು ಕೂಡ ಪಟೇಲ್ ಅವರನ್ನು ಥಳಿಸಲು ಯತ್ನಿಸಿದರು. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ .
Teacher surveying m@dra$as attacked by religious extremists in #Ahmedabad, Gujarat
Hindus expect such incidents not to occur under BJP Government in Gujarat pic.twitter.com/O6rcu8VXgq
— Sanatan Prabhat (@SanatanPrabhat) May 19, 2024
೧. ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದ (ಎನ್. ಸಿ.ಪಿ.ಆರ್.ದ ) ಆದೇಶದ ಮೇರೆಗೆ ರಾಜ್ಯದ ಎಲ್ಲಾ ಮದರಸಾಗಳ ಸಮೀಕ್ಷೆ ನಡೆಯುತ್ತಿದೆ. ಇದರ ಅಂತರ್ಗತ ಮದರಸಾಗಳು ಮತ್ತು ಅಲ್ಲಿ ಕಲಿಯುವ ಮುಸಲ್ಮಾನನೇತರ ಮಕ್ಕಳ ನಿಧಿ ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
೨. ಸದ್ಯ ಸಂಪೂರ್ಣ ಗುಜರಾತಿನಲ್ಲಿ ೧ ಸಾವಿರದ ೨೦೦ ಮದರಸಾಗಳಿವೆ. ಕರ್ಣಾವತಿ ನಗರದಲ್ಲಿಯೇ ೧೭೫ ಮದರಸಾಗಳು ಮತ್ತು ಕರ್ಣಾವತಿಯ ಗ್ರಾಮೀಣ ಭಾಗದಲ್ಲಿ ೩೦ ಮದರಸಾಗಳಿವೆ. ಇವುಗಳ ಸಮೀಕ್ಷೆ ನಡೆದ ಬಳಿಕ ಶಿಕ್ಷಣ ಇಲಾಖೆಗೆ ವರದಿ ಕಳುಹಿಸಲಾಗುವುದು. ಸಮೀಕ್ಷೆಗಾಗಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿ ಎಲ್ಲಾ ಜಿಲ್ಲೆಯ ಶಿಕ್ಷಣಾಧಿಕಾರಿಗಳ ಕಡೆಗೆ ಕೆಲಸ ಒಪ್ಪಿಸಿದ್ದು ಇದರಲ್ಲಿ ಒಟ್ಟು ೧೧ ಪ್ರಕರಣಗಳಲ್ಲಿ ವಿಚಾರಣೆಯ ಆದೇಶ ನೀಡಲಾಗಿದೆ.
ಸಂಪಾದಕೀಯ ನಿಲುವುಗುಜರಾತದಲ್ಲಿ ಬಿಜೆಪಿ ಸರಕಾರ ಇರುವಾಗ ಇಂತಹ ಘಟನೆಗಳು ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ