Gujarat Temple Attacked : ಕರ್ಣಾವತಿ (ಗುಜರಾತ): ಮತಾಂಧ ಮುಸಲ್ಮಾನರಿಂದ ಹಿಂದೂ ದೇವಸ್ಥಾನದ ಮೇಲೆ ದಾಳಿ !

  • ದೇವತೆಯ ಮೂರ್ತಿಗಳು ಧ್ವಂಸ

  • ಅಲ್ಲಿನ ಗೋರಿಗಳು ಧ್ವಂಸ ಮಾಡಿದ ವದಂತಿಗಳಿಂದ ದಾಳಿ !

ಕರ್ಣಾವತಿ (ಗುಜರಾತ) – ಗುಜರಾತಿನ ಪ್ರೇರಣಾ ಪೀಠ ನಿಷ್ಕಳಂಕಿ ದೇವಸ್ಥಾನದ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಅವರು ದೇವಿ ದೇವತೆಯರ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲಿನ ಪಿರಾನಾದಲ್ಲಿರುವ ಈ ದೇವಸ್ಥಾನದ ಮೇಲೆ ನಡೆದಿರುವ ದಾಳಿಯ ವಿಡಿಯೋ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಮುಸಲ್ಮಾನರ ಗುಂಪೊಂದು ಟೋಪಿಗಳನ್ನು ಧರಿಸಿ ದೇವಸ್ಥಾನದ ಮೇಲೆ ಲಾಠಿ ಕೋಲುಗಳಿಂದ ದಾಳಿ ನಡೆಸಿದ್ದಾರೆ. ಈ ದಾಳಿ ಪೂರ್ವ ನಿಯೋಜಿತವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿಕೆ ನೀಡಿದೆ.

ಈ ಸ್ಥಳಕ್ಕಾಗಿ ಅನೇಕ ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಮುಸಲ್ಮಾನರು ದೇವಸ್ಥಾನದ ಈ ಜಾಗವನ್ನು ತಮ್ಮ ದರ್ಗಾ ಭೂಮಿ ಎಂದು ದಾವೆ ಮಾಡಿದ್ದರು. ಆದರೆ ಈ ಸ್ಥಳದಲ್ಲಿ ಮೂಲವಾಗಿ ಮಂದಿರ ಇರುವುದಾಗಿ ಹಿಂದೂಗಳ ಶ್ರದ್ಧೆಯಾಗಿದೆ. ಈ ಪ್ರದೇಶದಿಂದ ಕೆಲವು ಗೋರಿಗಳು ತೆರವುಗೊಳಿಸಿರುವ ವದಂತಿ ಹರಡಿತ್ತು. ಇದರಿಂದ ಸ್ಥಳೀಯ ಮುಸಲ್ಮಾನರು ರೊಚ್ಚಿಗೆದ್ದು ಲಾಠಿಗಳು ಮತ್ತು ಕಬ್ಬಿಣದ ಸಲಾಕೆ ತೆಗೆದುಕೊಂಡು ದೇವಸ್ಥಾನದ ಮೇಲೆ ದಾಳಿ ನಡೆಸಿದರು. ಈ ದಾಳಿಯ ವಿಡಿಯೋ ವಿಶ್ವ ಹಿಂದೂ ಪರಿಷತ್ ತನ್ನ instagram ಖಾತೆಯಲ್ಲಿ ಪ್ರಸಾರ ಮಾಡಿದೆ.

ಏನು ಈ ಪ್ರಕರಣ ?

ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ .೨೦೨೨ ರಲ್ಲಿ ಇಮಾಮ್ ಶಾಹ ದರ್ಗಾ ಟ್ರಸ್ಟ್ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರ ದಾಖಲಿಸಲಾಗಿತ್ತು. ಆ ಪ್ರತಿಜ್ಞಾ ಪತ್ರದಲ್ಲಿ ಈ ಭೂಭಾಗ ಹಿಂದೂಗಳ ಧಾರ್ಮಿಕ ಸ್ಥಳವಾಗಿದ್ದು, ಅಲ್ಲಿನ ಸಂಸ್ಥೆ ಸತಪಂಥಿಗಳದ್ದಾಗಿದೆ ಎಂದು ಬರೆದಿದೆ. ಸತಪಂಥ ಎಂಬುದು ಮುಸಲ್ಮಾನರ ಒಂದು ಪಂಥ ಎಂದು ನಂಬಲಾಗಿದೆ.
ಇಮಾಮ್ ಶಾಹ ಟ್ರಸ್ಟಿನಿಂದ ಪ್ರತಿಜ್ಞಾಪತ್ರ ಪ್ರಸ್ತುತಪಡಿಸುವಾಗ, ಪಿರಾನಾದಲ್ಲಿ ೬೦೦ ವರ್ಷಗಳ ಹಳೆಯ ಮಸೀದಿ, ದರ್ಗಾ ಮತ್ತು ದೇವಸ್ಥಾನ ಇದೆ. ಈ ಜಾಗ ಮೂಲತಃ ಮುಸಲ್ಮಾನರ ಸಂಸ್ಥೆ ಮತ್ತು ಹಿಂದೂ ಧಾರ್ಮಿಕ ಸ್ಥಳವಾಗಿದೆ ಎಂದು ಹೇಳುವುದು ಯೋಗ್ಯವಲ್ಲ. ಟ್ರಸ್ಟಿನ ಸದಸ್ಯರಲ್ಲಿ ಹಿಂದೂ ಮತ್ತು ಮುಸಲ್ಮಾನ ಹೀಗೆ ಎರಡೂ ಸಮುದಾಯದ ಜನರ ಸಮಾವೇಶ ಇರುವುದಾಗಿ ಕೂಡ ಹೇಳಲಾಗಿದೆ.

ಸಂಪಾದಕೀಯ ನಿಲುವು

  • ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮಾಡಿ ದೇವತೆಗಳ ಮೂರ್ತಿಗಳನ್ನು ಧ್ವಂಸ ಮಾಡಲು ಇದು ಭಾರತವೇ ಅಥವಾ ಪಾಕಿಸ್ತಾನವೇ ?
    ಬಹು ಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ದೇವಸ್ಥಾನಗಳು ಅಸುರಕ್ಷಿತವಾಗಿವೆ, ಇನ್ನು ಬಹು ಸಂಖ್ಯಾತ ಮುಸಲ್ಮಾನರಿರುವ ಪಾಕಿಸ್ತಾನದಲ್ಲಿ ಕೂಡ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತವಾಗಿವೆ. ಇದು ಮತಾಂಧ ಮುಸಲ್ಮಾನರ ಮತಾಂಧತೆ ಆಗಿದೆಯೇ ಅಥವಾ ಹಿಂದೂಗಳಲ್ಲಿನ ಧರ್ಮಭಿಮಾನ ಶೂನ್ಯತೆ ಆಗಿದೆಯೇ !
  • ಗುಜರಾತಿನಲ್ಲಿ ಭಾಜಪದ ಸರ್ಕಾರ ಇರುವಾಗ ಇಂತಹ ದಾಳಿಗಳು ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಸಂಬಂಧಿತ ಮತಾಂಧರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಮಸ್ತ ಹಿಂದುಗಳ ಆಗ್ರಹವಾಗಿದೆ !