
ಚಿತ್ರದುರ್ಗ – ಮುಸ್ಲಿಮರಿಗೆ ಭಾಜಪದ ಮಾನಸಿಕತೆ ತೊಂದರೆ ನೀಡುತ್ತಿದೆ ಎಂದು ಕಾಂಗ್ರೆಸ್ಸಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಮಾಜಿ ಸಚಿವ ಮತ್ತು ಕಾಂಗ್ರೆಸ್ಸಿನ ಹಿರಿಯ ನಾಯಕ ಎಚ್. ಆಂಜನೇಯ ಇವರು ಚಿತ್ರದುರ್ಗದಲ್ಲಿ ಬೆಂಬಲಿಸಿದರು. ಅವರು ಮಾತನಾಡಿ, ಯಾರು ಎಷ್ಟೇ ತೊಂದರೆ ಕೊಟ್ಟರೂ ದೇಶದಲ್ಲಿ ವಾಸಿಸುತ್ತಿರುವವರು ದೇಶವನ್ನು ತೊರೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಲ್ಲಿ ವಾಸಿಸುವ ಎಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದಾರೆ. ಮುಸಲ್ಮಾನರು ಕೂಡ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಬ್ರಿಟಿಷರು ಗುಂಡು ಹಾರಿಸುತ್ತಿದ್ದಾಗ ಮುಸಲ್ಮಾನ, ಸಿಖ್ಖ, ಲಿಂಗಾಯತರು, ಬ್ರಾಹ್ಮಣರು ಏಕೆ ಹೇಳುತ್ತಿದ್ದರೇ ? ಬ್ರಿಟಿಷರನ್ನು ದೇಶಬಿಟ್ಟು ಓಡಿಸುವಾಗ ಮುಸ್ಲಿಮರೇ ಹೆಚ್ಚು ಬಲಿದಾನ ಮಾಡಿದ್ದಾರೆ ಎಂದು ಹೇಳಿದರು.
ಆಂಜನೇಯ ಅವರು ತಮ್ಮ ಮಾತನ್ನು ಮುಂದುವರಿಸಿ, ನಾವೇ ದೇಶವನ್ನು ನಿರ್ಮಿಸಿದ್ದೇವೆ, ನಾವೇ ಗೆಲ್ಲುತ್ತೇವೆ, ನಾವೇ ದೇಶವನ್ನು ಆಳುತ್ತೇವೆ ! (ಹಗಲುಗನಸು ಕಾಣುತ್ತಿರುವ ಆಂಜನೇಯ – ಸಂಪಾದಕರು) ಶೇ. 75 ರಷ್ಟು ಹಿಂದೂಗಳು ನಮ್ಮ ಪರವಾಗಿದ್ದಾರೆ. ಮುಸಲ್ಮಾನರಿಗೆ ಭಾಜಪದಿಂದ ಏನೂ ಬೇಡ; ಆದರೆ ಹಿಂದೂಗಳಿಗೆ ಭಾಜಪ ಏನು ಕೊಟ್ಟಿದೆ ? ಹಿಂದೂ ಎಂದು ಹೇಳಿ ಅವರು ಹಿಂದೂಗಳನ್ನು ಹಿಂದೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
In India’s freedom struggle, most sacrifice made by Muslims ! – H Anjaneya, Congress Leader and Former Minister, Karnataka
A shameless statement made by a leader of #Congress – a party whose whole existence depends on the Mu$l!m votebank !
If Mu$l!ms sacrificed the most in… pic.twitter.com/GQrxlElnlQ
— Sanatan Prabhat (@SanatanPrabhat) April 24, 2024
ಸಂಪಾದಕೀಯ ನಿಲುವುಒಂದು ವೇಳೆ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ಹೆಚ್ಚು ಬಲಿದಾನ ಮಾಡಿದ್ದರೆ, ಅವರು ದೇಶದ ವಿಭಜನೆಗೆ ಏಕೆ ಅವಕಾಶ ನೀಡಿದರು ? ಇಂತಹ ಖೇದಕರ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ಸಿಗರು ಹಿಂದೂಗಳ ತ್ಯಾಗವನ್ನು ಅವಮಾನ ಮಾಡುತ್ತಿದ್ದಾರೆ. ಹಿಂದೂಗಳು ಇಂತಹ ಕಾಂಗ್ರೆಸ್ಸನ್ನು ಎಂದಿಗೂ ಮರೆಯುವುದಿಲ್ಲ ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ