ಭಾರತವು ಕೆನಡಾದ 41 ರಾಜಕೀಯ ಅಧಿಕಾರಿಗಳನ್ನು ತೆಗೆದುಹಾಕಿರುವುದಕ್ಕೆ ಕೆನಡಾದ ಪ್ರತ್ಯುತ್ತರ!

ಒಟ್ಟಾವಾ (ಕೆನಡಾ) – ಕೆನಡಾ ಭಾರತದಲ್ಲಿರುವ ತನ್ನ ರಾಜಕೀಯ ಕಚೇರಿಗಳಲ್ಲಿ ಕೆಲಸ ಮಾಡುವ ಅನೇಕ ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದೆ ಹಾಗೆಯೇ ಚಂಡೀಗಢ, ಮುಂಬಯಿ ಮತ್ತು ಬೆಂಗಳೂರಿನಲ್ಲಿರುವ ಕೆನಡಾದ ವಾಣಿಜ್ಯ ರಾಯಭಾರ ಕಚೇರಿಯ ಎಲ್ಲ ಸಿಬ್ಬಂದಿಗಳನ್ನು ತೆಗೆದು ಹಾಕಿದೆಯೆಂದು ಈ ಸಂದರ್ಭದಲ್ಲಿ ಕೆನಡಾದ ಹೈಕಮಿಷನ್ ಸಾರ್ವಜನಿಕ ಸಂಪರ್ಕ ಕಚೇರಿ ತಿಳಿಸಿದೆ. ಭಾರತ ಕೆನಡಾದ ರಾಜಕೀಯ ಅಧಿಕಾರಿಗಳನ್ನು ತೆಗೆದುಹಾಕಿದ ಬಳಿಕ ಈ ನಿರ್ಣಯವನ್ನು ತೆಗೆದುಕೊಂಡಿದೆ.
ಕಳೆದ ವರ್ಷ ಭಾರತವು ಕೆನಡಾ ದೇಶಕ್ಕೆ ಅದರ 62 ರಾಜತಾಂತ್ರಿಕರಲ್ಲಿ 41 ರಾಜತಾಂತ್ರಿಕರನ್ನು ಮರಳಿ ಕರೆಸಿಕೊಳ್ಳುವಂತೆ ಹೇಳಿತ್ತು. ಎರಡೂ ದೇಶಗಳ ರಾಜಕೀಯ ಸಿಬ್ಬಂದಿಗಳ ಸಂಖ್ಯೆ ಸಮಾನವಾಗಿರಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯೆಂದು ವಿದೇಶಾಂಗ ಸಚಿವಾಲಯ ಹೇಳಿತ್ತು. `ಭಾರತದಲ್ಲಿ ಉಪಸ್ಥಿತರಿರುವ ಕೆನಡಾದ ಹೆಚ್ಚುವರಿ ರಾಜತಾಂತ್ರಿಕರು ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಾರೆ’ ಎಂದು ಭಾರತ ಆರೋಪಿಸಿತ್ತು.
ಭಾರತವು ನಮ್ಮ ನಾಗರಿಕರ ಸೇವೆಯನ್ನು ಮುಂದುವರಿಸುತ್ತವೆ! – ಕೆನಡಾ
`ನಾವು ಭಾರತದಲ್ಲಿ ನಮ್ಮ ನಾಗರಿಕರಿಗೆ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ. ಕೆನಡಾದಲ್ಲಿ ಅಧ್ಯಯನ ಮಾಡಲು, ಕೆಲಸ ಮಾಡಲು ಅಥವಾ ವಾಸಿಸಲು ಭಾರತೀಯ ನಾಗರಿಕರನ್ನು ನಾವು ಸ್ವಾಗತಿಸುತ್ತಲೇ ಇರುತ್ತೇವೆ.’ – ಕೆನಡಾದ ಹೈ ಕಮಿಷನ್
Canada Slashes Local Staff in Indian Missions Due to Reduction in Diplomats#Diplomacyhttps://t.co/gLxbXBWdvr
— The Wire (@thewire_in) April 12, 2024
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
‘ಪೇಟ್ರಿಯಾಟ್ ಇಂಟರ್ಸೆಪ್ಟರ್’ ಕ್ಷಿಪಣಿಗಳ ಕೊರತೆ; ಇರಾನ್ ಮೇಲಿನ ಬೃಹತ್ ದಾಳಿಯನ್ನು ತಡೆದ ಟ್ರಂಪ್
ಪಾಕಿಸ್ತಾನ: ಹಸಿವಿನ ದರದಲ್ಲಿ ಶೇಕಡಾ ೩೭% ರಷ್ಟು ಏರಿಕೆ ! – ವಿಶ್ವಸಂಸ್ಥೆ
ನೇಪಾಳದಿಂದ ಭಾರತೀಯ ಕರೆನ್ಸಿ ಮೇಲಿನ ನಿಷೇಧ ಹಿಂಪಡೆ
ಅಮೆರಿಕದ ಬೇಹುಗಾರಿಕೆ ಸಂಸ್ಥೆಯ ಮಾಜಿ ಅಧಿಕಾರಿಯ ಬಾಂಗ್ಲಾದೇಶದ ರಹಸ್ಯ ಭೇಟಿಯಿಂದ ಚರ್ಚೆಗೆ ವೇಗ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ