ಭಾರತವು ಕೆನಡಾದ 41 ರಾಜಕೀಯ ಅಧಿಕಾರಿಗಳನ್ನು ತೆಗೆದುಹಾಕಿರುವುದಕ್ಕೆ ಕೆನಡಾದ ಪ್ರತ್ಯುತ್ತರ!

ಒಟ್ಟಾವಾ (ಕೆನಡಾ) – ಕೆನಡಾ ಭಾರತದಲ್ಲಿರುವ ತನ್ನ ರಾಜಕೀಯ ಕಚೇರಿಗಳಲ್ಲಿ ಕೆಲಸ ಮಾಡುವ ಅನೇಕ ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದೆ ಹಾಗೆಯೇ ಚಂಡೀಗಢ, ಮುಂಬಯಿ ಮತ್ತು ಬೆಂಗಳೂರಿನಲ್ಲಿರುವ ಕೆನಡಾದ ವಾಣಿಜ್ಯ ರಾಯಭಾರ ಕಚೇರಿಯ ಎಲ್ಲ ಸಿಬ್ಬಂದಿಗಳನ್ನು ತೆಗೆದು ಹಾಕಿದೆಯೆಂದು ಈ ಸಂದರ್ಭದಲ್ಲಿ ಕೆನಡಾದ ಹೈಕಮಿಷನ್ ಸಾರ್ವಜನಿಕ ಸಂಪರ್ಕ ಕಚೇರಿ ತಿಳಿಸಿದೆ. ಭಾರತ ಕೆನಡಾದ ರಾಜಕೀಯ ಅಧಿಕಾರಿಗಳನ್ನು ತೆಗೆದುಹಾಕಿದ ಬಳಿಕ ಈ ನಿರ್ಣಯವನ್ನು ತೆಗೆದುಕೊಂಡಿದೆ.
ಕಳೆದ ವರ್ಷ ಭಾರತವು ಕೆನಡಾ ದೇಶಕ್ಕೆ ಅದರ 62 ರಾಜತಾಂತ್ರಿಕರಲ್ಲಿ 41 ರಾಜತಾಂತ್ರಿಕರನ್ನು ಮರಳಿ ಕರೆಸಿಕೊಳ್ಳುವಂತೆ ಹೇಳಿತ್ತು. ಎರಡೂ ದೇಶಗಳ ರಾಜಕೀಯ ಸಿಬ್ಬಂದಿಗಳ ಸಂಖ್ಯೆ ಸಮಾನವಾಗಿರಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯೆಂದು ವಿದೇಶಾಂಗ ಸಚಿವಾಲಯ ಹೇಳಿತ್ತು. `ಭಾರತದಲ್ಲಿ ಉಪಸ್ಥಿತರಿರುವ ಕೆನಡಾದ ಹೆಚ್ಚುವರಿ ರಾಜತಾಂತ್ರಿಕರು ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಾರೆ’ ಎಂದು ಭಾರತ ಆರೋಪಿಸಿತ್ತು.
ಭಾರತವು ನಮ್ಮ ನಾಗರಿಕರ ಸೇವೆಯನ್ನು ಮುಂದುವರಿಸುತ್ತವೆ! – ಕೆನಡಾ
`ನಾವು ಭಾರತದಲ್ಲಿ ನಮ್ಮ ನಾಗರಿಕರಿಗೆ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ. ಕೆನಡಾದಲ್ಲಿ ಅಧ್ಯಯನ ಮಾಡಲು, ಕೆಲಸ ಮಾಡಲು ಅಥವಾ ವಾಸಿಸಲು ಭಾರತೀಯ ನಾಗರಿಕರನ್ನು ನಾವು ಸ್ವಾಗತಿಸುತ್ತಲೇ ಇರುತ್ತೇವೆ.’ – ಕೆನಡಾದ ಹೈ ಕಮಿಷನ್
Canada Slashes Local Staff in Indian Missions Due to Reduction in Diplomats#Diplomacyhttps://t.co/gLxbXBWdvr
— The Wire (@thewire_in) April 12, 2024
ಇರಾನ್ ಗೆ 28 ಲಕ್ಷ ಕೋಟಿ ರೂಪಾಯಿ ನೀಡುವ ಸುದ್ದಿ ಸುಳ್ಳು! – Trump On Iran
ಇರಾನ್ಗೆ ಈಗ ಅಣುಬಾಂಬ್ಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಅಸ್ತ್ರ ಸಿಕ್ಕಿದೆ!
ಅತ್ಯಾಚಾರ ಪ್ರಕರಣದಲ್ಲಿ ನಾರ್ವೆಯ ‘ ಕ್ರೌನ್ ಪ್ರಿನ್ಸೆಸ್’ ನ ಮಗನಿಗೆ ೪ ವರ್ಷಗಳ ಜೈಲು ಶಿಕ್ಷೆ!
‘ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಜಾತ್ಯತೀತವಾಗಿದೆ, ಯಾವುದಾದರೂ ಇಸ್ಲಾಮಿಕ್ ದೇಶ ಜಾತ್ಯತೀತವಾಗಿದ್ದರೆ ತಿಳಿಸಿ !’ – ರಾಜಾ ಭಯ್ಯಾ, ಶಾಸಕರು, ಉತ್ತರ ಪ್ರದೇಶ
ಅಮೆರಿಕದಲ್ಲಿ ಬಾಂಬರ್ ವಿಮಾನ ಪತನ: ೮ ಜನರ ಸಾವು
ಪಂದ್ಯ ಮುಗಿದ ನಂತರ ಜಪಾನಿನ ವೀಕ್ಷಕರು ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಸ್ವತಃ ಎತ್ತಿ ಪರಿಸರವನ್ನು ಸ್ವಚ್ಛಗೊಳಿಸಿದರು!