ಕಡಬ (ದಕ್ಷಿಣ ಕನ್ನಡ) ಗೋ ಕಳ್ಳಸಾಗಾಣಿಕೆ ಮಾಡುತ್ತಿದ್ದ ವಾಹನ ಡಿಕ್ಕಿ; ಓರ್ವ ಹಿಂದೂವಿನ ಸಾವು !

ಹಿಂದುತ್ವನಿಷ್ಠ ಸಂಘಟನೆಯಿಂದ ರಸ್ತೆ ತಡೆ ಪ್ರತಿಭಟನೆ

ಕಡಬ – ಉಪ್ಪಿನಅಂಗಡಿಯ ಮರ್ದಾಳ ಜಂಕ್ಷನ್ ಹೆದ್ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವಿಠಲ ರಾಯ ಎಂಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ವಾಹನದ ಚಾಲಕನು ಪರಾರಿ ಆಗಿದ್ದಾನೆ.

(ಸೌಜನ್ಯ – Spandana TV l ಸ್ಪಂದನ ಟಿವಿ)

ಆ ವಾಹನವನ್ನು ಹುಡುಕಿದ ನಂತರ ಈ ವಾಹನದಲ್ಲಿ ಎರಡು ಹಸುಗಳ ಅಕ್ರಮ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ. ಅದರ ನಂತರ ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳು ರಸ್ತೆ ತಡೆ ಪ್ರತಿಭಟನೆ ನಡೆಸಿ ಆರೋಪಿಯನ್ನು ಬಂಧಿಸುವ ಬೇಡಿಕೆ ಸಲ್ಲಿಸಿದವು. ಆರೋಪಿಯನ್ನು ಬಂಧಿಸುವವರೆಗೆ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಹಲವು ಗಂಟೆಗಳ ಕಾಲ ಪ್ರತಿಭಟನೆಯನ್ನು ಮುಂದುವರೆಸಿದ್ದರು.