ನವ ದೆಹಲಿ – ಕೇಂದ್ರ ಸರಕಾರವು ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಪ್ರಮುಖ ಸದಾನಂದ ದಾತೆ ಇವರನ್ನು ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ.ಯ) ಮಹಾಸಂಚಾಲಕರ ಸ್ಥಾನಕ್ಕೆ ನೇಮಕಗೊಳಿಸಿದೆ. ದಾತೆ ಇವರು ಮುಂಬಯಿಯಲ್ಲಿ ಸಹ ಪೊಲೀಸ ಆಯುಕ್ತರ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ ಅವರು ಮೀರಾ-ಭಾಯಿಂದರದ ಪೊಲೀಸ ಆಯುಕ್ತರು ಕೂಡ ಆಗಿದ್ದರು. ನವಂಬರ್ ೨೯, ೨೦೦೮ ರಂದು ಮುಂಬಯಿಯಲ್ಲಿ ನಡೆದ ಉಗ್ರರ ದಾಳಿಯ ಸಮಯದಲ್ಲಿ ಕಾಮಾ ಆಸ್ಪತ್ರೆಯಲ್ಲಿ ಅವರು ಭಯೋತ್ಪಾದಕರ ವಿರುದ್ಧ ಹೋರಾಡಿದ್ದರು. ಕಳೆದ ೩೦ ವರ್ಷಗಳಿಂದ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಸೇವೆಯಲ್ಲಿ ಅವರಿಗೆ ಇರುವ ಸುಧೀರ್ಘ ಅನುಭವದ ಆಧಾರದಲ್ಲಿ ಅವರು ‘ವರ್ದಿತಿಲ ಮಾಣಸಾಂಚ್ಯಾ ನೊಂದಿ’ (ಸಮವಸ್ತ್ರದಲ್ಲಿನ ಮನುಷ್ಯನ ಹಸ್ತಕ್ಷೇಪ) ಈ ಪುಸ್ತಕ ಬರೆದಿದ್ದಾರೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ದೆಹಲಿ > ಸದಾನಂದ ದಾತೆ ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ.ಯ) ನೂತನ ಮಹಾಸಂಚಾಲಕರು
ಸದಾನಂದ ದಾತೆ ರಾಷ್ಟ್ರೀಯ ತನಿಖಾ ದಳದ (ಎನ್.ಐ.ಎ.ಯ) ನೂತನ ಮಹಾಸಂಚಾಲಕರು
ಸಂಬಂಧಿತ ಲೇಖನಗಳು
- ಚಿಕ್ಕಮಗಳೂರಿನಲ್ಲಿ ಬಜರಂಗದಳದ ಮಾಜಿ ಪದಾಧಿಕಾರಿಗೆ ಗಡಿಪಾರು ಆದೇಶ !
- Loksabha Elections 2024 : ಧರ್ಮದ ಆಧಾರದಲ್ಲಿ ಮತ ಕೇಳಿದ್ದಕ್ಕಾಗಿ ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು !
- ಮಾನೇಸರ (ಹರಿಯಾಣ)ದಲ್ಲಿ 400 ವರ್ಷಗಳಷ್ಟು ಪ್ರಾಚೀನ ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳು ಪತ್ತೆ !
- Gyanvapi Case : ಜ್ಞಾನವಾಪಿ ಸಮೀಕ್ಷೆಯ ನಿರ್ಣಯ ನೀಡಿದ ನ್ಯಾಯಾಧೀಶರಿಗೆ ಮತ್ತೆ ಬೆದರಿಕೆ !
- ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸುವ ಯತ್ನ ನಡೆಸಿದ್ದ ಮುಸಲ್ಮಾನನ ಹತ್ಯೆಗೈದ ಪತಿ
- ರಾಜ್ಯದಲ್ಲಿ ಸಾವಿರಾರು ಮಹಿಳೆಯರ ಲೈಂಗಿಕ ಅತ್ಯಾಚಾರದ ವಿಡಿಯೋಗಳ ಪ್ರಸಾರ !