Hiren Patel Murder Case : ಗುಜರಾತ್ ನ ಭಾಜಪದ ನಗರಸೇವಕನ ಹತ್ಯೆಯ ೯ ನೇ ಆರೋಪಿ ೪ ವರ್ಷಗಳ ನಂತರ ಬಂಧನ

ಆರೋಪಿ ಮಹಮ್ಮದ್ ಇರ್ಫಾನ್ ಬಿಸ್ತಿ

ದಾಹೋದ (ಗುಜರಾತ) – ಇಲ್ಲಿ ೪ ವರ್ಷದ ಹಿಂದೆ ಭಾಜಪದ ನಗರಸೇವಕ ಹಿರೇನ್ ಪಟೇಲ್ ಇವರ ಹತ್ಯೆಯಲ್ಲಿನ ೯ ನೆಯ ಆರೋಪಿ ಮಹಮ್ಮದ್ ಇರ್ಫಾನ್ ಬಿಸ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವನು ಇಂದೂರನಲ್ಲಿದ್ದು ಕ್ಷೌರದಂಗಡಿ ನಡೆಸುತ್ತಿದ್ದನು. (ಅವನಿಗೆ ಸಹಾಯ ಮಾಡುವವರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು. ಮತಾಂಧ ಮುಸಲ್ಮಾನರು ಪರಸ್ಪರ ಹೇಗೆ ಸಹಾಯ ಮಾಡುತ್ತಾರೆ, ಇದೇ ಇದರಿಂದ ತಿಳಿದು ಬರುತ್ತದೆ ! – ಸಂಪಾದಕರು) ಸಪ್ಟೆಂಬರ್ ೨೭, ೨೦೨೦ ರಂದು ಮಾರ್ನಿಂಗ್ ವಾಕ್ ಮಾಡಲು ಹೊರಟಿದ್ದ ಪಟೇಲ್ ಇವರನ್ನು ವಾಹನ ಹಾಯಿಸಿ ಹತ್ಯೆ ಮಾಡಿದ್ದರು. ದಾಹೋದದ ಮಾಜಿ ಸಂಸದ ಬಾಬುಭಾಯಿ ಕಟಾರಾ ಇವರ ಪುತ್ರ ಅಮಿತ್ ಕಟಾರಾ ಇವನು ಹತ್ಯೆಯ ಷಡ್ಯಂತ್ರ ರೂಪಿಸಿದ್ದ. ಅವನು ಗೂಂಡಾಗಳಿಗೆ ಹಣ ನೀಡಿ ಈ ಹತ್ಯೆ ಮಾಡಿಸಿದ್ದನು.