ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ವಿದ್ಯಾರ್ಥಿ ಮುಖಂಡನಿಂದ ಹಿಂದೂ ಡಾಬಾ ಮಾಲೀಕನ ಮೇಲೆ ಮಾರಣಾಂತಿಕ ದಾಳಿ !

ಸಿಲಹಟ (ಬಾಂಗ್ಲಾದೇಶ) – ಇಲ್ಲಿ ರಮಜಾನ್ ಸಮಯದಲ್ಲಿ ರಾಜೀವ ಕುಮಾರ ಡೇ ಹೆಸರಿನ ಹಿಂದೂ ತನ್ನ ಡಾಬಾವನ್ನು ತೆರೆದಿಟ್ಟಿದ್ದರಿಂದ, ಅವನ ಮೇಲೆ ಮತಾಂಧ ಮುಸಲ್ಮಾನರು ಮಾರಣಾಂತಿಕ ದಾಳಿ ನಡೆಸಿದರು. ಹಾಗೆಯೇ ಅವನ ಬಳಿಯಿದ್ದ ಹಣವನ್ನು ದೋಚಿದರು. ಸೊಹೆಲ್ ಹುಸೈನ ಹೆಸರಿನ ಮುಸಲ್ಮಾನನು ತನ್ನ ಸಹೋದರರೊಂದಿಗೆ ಈ ದಾಳಿ ನಡೆಸಿದನು. ಸೊಹೆಲ್ ಹುಸೇನ ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್‌ನ ವಿದ್ಯಾರ್ಥಿ ಸಂಘಟನೆಯಾದ ‘ಛಾತ್ರ ಲೀಗ್’ನ ಮುಖಂಡನಾಗಿದ್ದಾನೆಂದು ಹೇಳಲಾಗುತ್ತಿದೆ. ರಮಜಾನ ನಿಮಿತ್ತ ರಾಜೀವ ಕುಮಾರ ಬಳಿ ಅವನು ಚಂದಾ ಕೇಳಿದ್ದನು. ರಾಜೀವ ಕುಮಾರನು ನಿರಾಕರಿಸಿದ್ದರಿಂದ ಈ ದಾಳಿ ನಡೆಸಿರುವುದಾಗಿ ಹೇಳಲಾಗುತ್ತಿದೆ. ಈ ಘಟನೆ ಮಾರ್ಚ 15 ರಂದು ನಡೆದಿದೆ.

ಸಂಪಾದಕೀಯ ನಿಲುವು

ಆಡಳಿತ ಪಕ್ಷದ ಪ್ರಧಾನಮಂತ್ರಿ ಶೇಖ ಹಸೀನಾ ಅವರು ಭಾರತದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವಾಗಲೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಈ ಸ್ಥಿತಿಯನ್ನು ನೋಡಿದರೆ, ಶೇಖ ಹಸೀನಾರಿಂದ ಅಲ್ಲಿನ ಹಿಂದೂಗಳಿಗೆ ಯಾವುದೇ ಆಧಾರವಿಲ್ಲೆನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ !