ಭೂವಿವಾದದಿಂದಾಗಿ ಪೋಷಕರಿಗೆ ಥಳಿಸಿದ ಮಗನ ಬಂಧನ !

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಅಣ್ಣಮಯ್ಯ ಎಂಬಲ್ಲಿ ೩ ಎಕರೆ ಜಮೀನು ತನ್ನ ದೊಡ್ಡ ಅಣ್ಣನಿಗೆ ನೀಡಿದ್ದಕ್ಕಾಗಿ ಕಿರಿಯ ಸಹೋದರ ತನ್ನ ಪೋಷಕರಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಿರಿಯ ಮಗ ಶ್ರೀನಿವಾಸುಲು ರೆಡ್ಡಿ ತನ್ನ ವಯಸ್ಸಾದ ತಾಯಿಯ ಜುಟ್ಟು ಎಳೆದು ಒದೆಯುತ್ತಿರುವ ದೃಶ್ಯವಿದೆ. ತಾಯಿಗೆ ಥಳಿಸಿದ ಬಳಿಕ ಪಕ್ಕದಲ್ಲಿ ಕುಳಿತಿದ್ದ ತಂದೆಗೂ ಥಳಿಸಿದ್ದಾನೆ. ವಿಡಿಯೋ ವೈರಲ್ ಆದ ನಂತರ ಅಣ್ಣಮಯ್ಯ ಪೊಲೀಸರು ಶ್ರೀನಿವಾಸ್ ನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಆಸ್ತಿಗಾಗಿ ತಂದೆ-ತಾಯಿಯನ್ನು ಹೊಡೆಯುವ ಮಗ ಇರುವುದು ಸಮಾಜದ ನೈತಿಕತೆಯು ಪತನವಾಗಿರುವುದು ಕಂಡು ಬರುತ್ತದೆ ! ಜನರ ಮೇಲೆ ಸಾಧನೆಯ ಮತ್ತು ತ್ಯಾಗದ ಸಂಸ್ಕಾರ ಕಲಿಸದ ಈಗಿನ ಎಲ್ಲ ಪಕ್ಷದ ಆಡಳಿತಗಾರರೇ ಇದಕ್ಕೆ ಹೊಣೆ !