ದೇವಸ್ಥಾನಕ್ಕೆ ೧ ಕೋಟಿ ದೆಣಗಿ ಸಿಕ್ಕರೆ ಸರಕಾರಕ್ಕೆ ೧೦ ಲಕ್ಷ ರೂಪಾಯಿ ನೀಡಬೇಕು !

  • ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನದ ಕುರಿತಾದ ವಿಧೇಯಕ್ಕೆ ಅಂಗಿಕಾರ !

  • ದೇವಸ್ಥಾನ ವ್ಯವಸ್ಥಾಪಕ ಸಮಿತಿಯಲ್ಲಿ ಇತರ ಧರ್ಮದವರ ನೇಮಕಾತಿ !

  • ವಿಧೇಯಕಕ್ಕೆ ಭಾಜಪದಿಂದ ವಿರೋಧ !

ಬೆಂಗಳೂರು – ರಾಜ್ಯ ಸರಕಾರವು ಇತ್ತೀಚಿಗೆ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಚಾರಿಟೇಬಲ್ ಎಂಡೋಮೆಂಟ್ ಬಿಲ್ ೨೦೨೪’ ಅಂಗೀಕರಿಸಿದೆ. ಈ ವಿಧೇಯಕ ಸರಕಾರಕ್ಕೆ ದೇವಸ್ಥಾನದಿಂದ ತೆರಿಗೆ ವಸೂಲಿ ಮಾಡುವ ಅಧಿಕಾರ ನೀಡುತ್ತದೆ. ಈ ವಿಧೇಯಕದ ಪ್ರಕಾರ ‘ಹಿಂದೂ ದೇವಸ್ಥಾನದ ಆದಾಯ ೧ ಕೋಟಿ ರೂಪಾಯಿ ಇದ್ದರೆ ಆಗ ಸರಕಾರ ಅದರ ಮೇಲೆ ಶೇಕಡ ೧೦ ರಷ್ಟು ತೆರಿಗೆ ವಿಧಿಸುವುದು ಮತ್ತು ಅದರ ಆದಾಯ ಒಂದು ಕೋಟಿಗಿಂತಲೂ ಕಡಿಮೆ ಆದರೆ ೧೦ ಲಕ್ಷ ರೂಪಾಯಿಗಿಂತ ಹೆಚ್ಚು ಇದ್ದರೆ ಅವರರಿಗೆ ಸರಕಾರ ಶೇಕಡಾ ೫ ರಷ್ಟು ತೆರಿಗೆ ವಿಧಿಸಬಹುದು. ದೇವಸ್ಥಾನದ ನಿರ್ವಹಣೆಯಲ್ಲಿ ಹಿಂದೂ ಮತ್ತು ಇತರ ಧರ್ಮದಲ್ಲಿನ ಸದಸ್ಯರ ನೇಮಕಾತಿ ಮಾಡಬಹುದು. ಭಾಜಪವು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದೆ.

ರಾಜ್ಯ ಸರಕಾರ ಕೇವಲ ಹಿಂದುಗಳ ದೇವಸ್ಥಾನವನ್ನು ಏಕೆ ಗುರಿ ಮಾಡುತ್ತಿದೆ ? ಇದರ ಧರ್ಮಕ್ಕೆ ಏಕೆ ಇಲ್ಲ ? – ಭಾಜಪ

ಭಾಜಪದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಇವರು ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡುತ್ತಾ, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ನಿರಂತರವಾಗಿ ಹಿಂದೂ ವಿರೋಧ ನೀತಿಗಳನ್ನು ಅನುಸರಿಸುತ್ತಿದೆ. ಕಾಂಗ್ರೆಸ್ಸಿಗೆ ಹಿಂದೂ ದೇವಸ್ಥಾನದ ಆದಾಯದ ಮೇಲೆ ಕಣ್ಣಿದೆ. ಸರಕಾರವು ಅದರ ಖಾಲಿಯಾಗಿರುವ ಖಜಾನೆಯನ್ನು ತುಂಬುವುದಕ್ಕಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಚಾರಿಟೇಬಲ್ ಎಂಡೋಮೆಂಟ್ ಬಿಲ್ ೨೦೨೪’ ಅನ್ನು ಅಂಗೀಕರಿಸಿದೆ.

ದೇವಸ್ಥಾನದ ನಿಧಿಯಿಂದ ಸರಕಾರ ಅದರ ಇತರ ಉದ್ದೇಶಗಳನ್ನು ಪೂರ್ಣಗೊಳಿಸುವುದು. ದೇವರಿಗಾಗಿ ಮತ್ತು ದೇವಸ್ಥಾನದ ವಿಕಾಸಕ್ಕಾಗಿ ಭಕ್ತರು ನೀಡಿರುವ ಅರ್ಪಣೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮತ್ತು ಭಕ್ತರ ಸೌಲಭ್ಯಕ್ಕಾಗಿ ಉಪಯೋಗಿಸಬೇಕು. ಅವರು ಅದನ್ನು ಇತರ ಯಾವುದೇ ಕಾರಣಕ್ಕೂ ಬಳಸಿದರೂ ಅದು ಭಕ್ತರಿಗೆ ವಂಚನೆ ಮಾಡಿದಂತೆ ಆಗುತ್ತದೆ. ರಾಜ್ಯ ಸರಕಾರ ಕೇವಲ ಹಿಂದೂ ದೇವಸ್ಥಾನಗಳನ್ನು ಏಕೆ ಗುರಿ ಮಾಡುತ್ತಿದೆ ? ಇತರ ಧರ್ಮವನ್ನು ಏಕೆ ಗುರಿ ಮಾಡುವುದಿಲ್ಲ ? ಭಾಜಪದ ನಾಯಕ ಮತ್ತು ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಇವರು, ಕರ್ನಾಟಕದಲ್ಲಿನ ದೇವಸ್ಥಾನದಿಂದ ಶೇಕಡ ೧೦ ರಷ್ಟು ಜಿಝಿಯ ತೆರಿಗೆ ಪಡೆಯುತ್ತಿದ್ದಾರೆ.

‘ನಾವು ಹಿಂದೂ ಧರ್ಮದ ನಿಜವಾದ ಬೆಂಬಲಿಗರು ! (ಅಂತೆ) – ಕಾಂಗ್ರೆಸ್

ಭಾಜಪದ ವಿರೋಧದ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಇವರು ಪ್ರತ್ಯುತ್ತರ ನೀಡುವಾಗ, ಭಾಜಪ ಯಾವಾಗಲೂ ಕಾಂಗ್ರೆಸನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತ ಲಾಭ ಪಡೆಯುತ್ತದೆ; ಆದರೆ ನಾವು ಹಿಂದೂ ಧರ್ಮದ ನಿಜವಾದ ಬೆಂಬಲಿಗರಾಗಿದ್ದೇವೆ; ಏಕೆಂದರೆ ಕಳೆದ ಕೆಲವು ವರ್ಷದಲ್ಲಿ ಕಾಂಗ್ರೆಸ್ಸಿನಿಂದ ದೇವಸ್ಥಾನ ಮತ್ತು ಹಿಂದುಗಳ ಹಿತದ ರಕ್ಷಣೆ ಮಾಡಿದೆ. (ಇದನ್ನೇ ಹೇಳುವುದು, ಕಳ್ಳನಿಗೊಂದು ಪಿಳ್ಳೆ ನೆವ ಅಂತ ! ಕಾಂಗ್ರೆಸ್ಸಿನ ಈ ಹೇಳಿಕೆಯನ್ನು ಚಿಕ್ಕ ಮಕ್ಕಳಾದರು ನಂಬುವರೆ ? – ಸಂಪಾದಕರು)

ದೇವಸ್ಥಾನ ವ್ಯವಸ್ಥಾಪಕ ಸಮಿತಿಯಲ್ಲಿ ಇತರ ಧರ್ಮದವರ ನೇಮಕಾತಿ ಮಾಡುವ ವಿಧೇಯಕ ರದ್ದುಪಡಿಸಿ ! – ಕರ್ನಾಟಕದ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆ ಮಹಾಸಂಘ

ರಾಜ್ಯ ಸರಕಾರವು ೧೬ ನೆಯ ವಿಧಾನಸಭೆಯ ಮೂರನೇಯ ಅಧಿವೇಶನದಲ್ಲಿ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಜಾರಿಟೇಬಲ್ ಎಂಡೋಮೆಂಟ್ ಬಿಲ್ ೨೦೨೪’ ಅಂಗೀಕರಿಸುವಾಗ ಅದರಲ್ಲಿನ ೨೫ ನೆಯ ಕಲಂ ನಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯಲ್ಲಿ ಇತರ ಧರ್ಮದವರ ನೇಮಕಾತಿ ಮಾಡಬಹುದು ಎಂದು ತಿದ್ದುಪಡಿ ಮಾಡಿದ್ದಾರೆ. ಈ ಹಿಂದೆ ಸುಧಾರಣೆಯಲ್ಲಿ ದೇವಸ್ಥಾನ ವ್ಯವಸ್ಥಾಪಕ ಸಮಿತಿಯಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಬೇರೆ ಯಾವುದೇ ಜನಾಂಗದ ಜನರನ್ನು ಸೇರಿಸಬಾರದೆಂದು ನಿರ್ಣಯಿಸಲಾಗಿತ್ತು. ಈಗ ರಾಜ್ಯ ಸರಕಾರವು ಅದರಲ್ಲಿ ಬದಲಾವಣೆ ಮಾಡಿರುವುದು ಖಂಡನಿಯವಾಗಿದೆ. ಈ ದೇವಸ್ಥಾನದಲ್ಲಿ ಹಿಂದೂ ಧರ್ಮದ ಮೇಲೆ ಶ್ರದ್ಧೆ ಇಲ್ಲದಿರುವವರನ್ನು ನೇಮಿಸಿ ದೇವಸ್ಥಾನದ ಸಂಪ್ರದಾಯ ಭಗ್ನಗೊಳಿಸುವ ಷಡ್ಯಂತ್ರವಾಗಿದೆ. ಹಿಂದೂ ದೇವಸ್ಥಾನದಲ್ಲಿ ವ್ಯವಸ್ಥಾಪಕ ಸಮಿತಿಯಲ್ಲಿ ಇತರ ಧರ್ಮದವರನ್ನು ನೇಮಕಾತಿ ಮಾಡುವವರು ಮುಸಲ್ಮಾನ ಓಲೈಕೆ ಸರಕಾರ ವಕ್ಪ್ ಬೋರ್ಡಿನಲ್ಲಿ ಹಿಂದುಗಳನ್ನು ನೇಮಕಾತಿ ಮಾಡುವರೆ ? ಸರಕಾರದ ಈ ವರ್ತನೆ ಹಿಂದೂ ವಿರೋಧಿ ನೀತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ರಾಜ್ಯ ಸರಕಾರವು ತಕ್ಷಣ ಈ ಬದಲಾವಣೆ ರದ್ದು ಪಡಿಸಬೇಕು. ಇಲ್ಲವಾದರೆ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸುವೆವು, ಎಂದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆ ಮಹಾಸಂಘದ ರಾಜ್ಯ ಸಂಯೋಜಕರು ಶ್ರೀ. ಮೋಹನ ಗೌಡ ಇವರು ಪ್ರಸಿದ್ಧಿಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಎಲ್ಲಿ ದೇವಸ್ಥಾನಗಳಿಗೆ ಹಣ ಅರ್ಪಿಸುವ ಹಿಂದಿನ ರಾಜರು ಹಾಗೂ ಎಲ್ಲಿ ದೇವಸ್ಥಾನದ ಹಣ ಕಿತ್ತುಕೊಳ್ಳುವ ಈಗಿನ ರಾಜಕಾರಣಿಗಳು !