ಭಾರತದ ಮೇಲೆ ‘ರಮ್ಮಿ ಸರ್ಕಲ್’ನ ಹಿಡಿತ !

ಮುಂಬಯಿ, ಫೆಬ್ರವರಿ 17 (ಸುದ್ದಿ.) – ‘ರಮ್ಮಿ ಆಟವಾಡಿ ಹಣ ಗೆಲ್ಲಿರಿ’ ಎಂಬ ಜಾಹೀರಾತು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಹಿಂದಿ ಮತ್ತು ಮರಾಠಿ ಚಿತ್ರರಂಗದ ಪ್ರಮುಖ ನಟರು, ಪ್ರಸಿದ್ಧ ಕ್ರಿಕೆಟಿಗರು ಮುಂತಾದವರ ‘ರಮ್ಮಿ ಸರ್ಕಲ್ ಆಪ್’. ಈ ಆಟವನ್ನು ಡೌನ್ಲೋಡ್ ಮಾಡಿ ಮತ್ತು ಆಡಲು ವಿನಂತಿಸಲಾಗುತ್ತಿದೆ. ಅಧಿಕೃತ ವೆಬ್ಸೈಟ್ https://www.rummycircle.com/index-marathi.html’ https://www.rummycircle.com/index-marathi.html ಪ್ರಕಾರ, ಭಾರತದಲ್ಲಿ 7 ಕೋಟಿಗೂ ಹೆಚ್ಚು ಜನರು ರಮ್ಮಿ ಆಡಲು ‘ರಮ್ಮಿ ಸರ್ಕಲ್ ಆಪ್’ ಅನ್ನು ಡೌನ್ಲೋಡ್ ಮಾಡಿದ್ದಾರೆ.
ಯುವಕರನ್ನು ಸೆಳೆಯಲು ವಿವಿಧ ಯೋಜನೆಗಳ ಆಮಿಶ !
ಈ ಆನ್ಲೈನ್ ಆಟವನ್ನು ಸುಪ್ರೀಂ ಕೋರ್ಟ್ ‘ಕೌಶಲ್ಯದ ಆಟ’ ಎಂದು ಹೇಳಿದೆ. ಆಟವನ್ನು ಮನರಂಜನೆಗಾಗಿ ಮತ್ತು ಹಣ ಸಂಪಾದಿಸಲು ಎರಡೂ ಆಡಬಹುದು; ಆದರೆ ‘ರಮ್ಮಿ ಆಟವಾಡಿ ಹಣ ಗಳಿಸಿ’ ಎಂಬ ಪ್ರಮುಖರ ಜಾಹೀರಾತುಗಳನ್ನು ನಿರಂತರವಾಗಿ ಪ್ರಸಾರ ಮಾಡುವ ಮೂಲಕ ಹಣ ಗಳಿಸುವ ಉದ್ದೇಶದಿಂದ ಯುವಕರು ಈ ಆಟ ಆಡುವಂತೆ ಪ್ರೇರೇಪಿಸುತ್ತಿದ್ದಾರೆ. ಸೆಲೆಬ್ರಿಟಿಗಳಿಂದ ಪ್ರಚಾರವಾಗುತ್ತಿರುವುದರಿಂದ ಭಾರತದ ಯುವ ಜನರು ಇದರತ್ತ ಆಕರ್ಷಿತವಾಗುತ್ತಿದೆ. ‘https://www.rummycircle.com/index-marathi.html’ ವೆಬ್ಸೈಟ್ ಅನ್ನು ಭಾರತದ ಅತಿದೊಡ್ಡ ಆನ್ಲೈನ್ ರಮ್ಮಿ ವೆಬ್ಸೈಟ್ ಎಂದು ಪ್ರಚಾರ ಮಾಡಲಾಗುತ್ತಿದೆ. ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ರಮ್ಮಿ ಆಡುವ ಮೂಲಕ ಅತಿ ಹೆಚ್ಚು ಹಣ ಗಳಿಸಿದ ಯುವಕರ ಪ್ರತಿಕ್ರಿಯೆ ಹಾಗೂ ‘ಎಷ್ಟು ಹಣ ಗಳಿಸಿದರು’ ಎಂಬ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ ನೀಡಿದೆ. ಇದರಲ್ಲಿ ಮಹಾರಾಷ್ಟ್ರದ ಮುಂಬಯಿ, ಪುಣೆಯಂತಹ ದೊಡ್ಡ ನಗರಗಳ ಯುವಕರ ಸಂಖ್ಯೆಯೇ ಹೆಚ್ಚು ಇದೆ. 24 ಗಂಟೆಗಳ ಕಾಲ ಆಟ ಮುಂದುವರಿಸಲಾಗಿದ್ದು, ಯುವಕರನ್ನು ಸೆಳೆಯಲು ನಾನಾ ಯೋಜನೆಗಳ ಆಮಿಶಗಳನ್ನೂ ನೀಡಲಾಗಿದೆ.
ಕಾನೂನಿನಲ್ಲಿ ಬದಲಾವಣೆ ತರಲು ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಸೂಚನೆ !

ವಿಧಾನಸಭೆಯ ಬೇಸಿಗೆ ಅಧಿವೇಶನದಲ್ಲಿ ಶಾಸಕ ಬಚ್ಚು ಕಾಡು ಇವರು ‘ಆನ್ಲೈನ್’ ಜೂಜಾಟದ ವಿಷಯವನ್ನು ಪ್ರಸ್ತಾಪಿಸಿ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಜಾಹೀರಾತು ನೀಡಿರುವುದನ್ನು ಸದನದಲ್ಲಿ ಖಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್, ಕಾನೂನಿನಲ್ಲಿ ಅಗತ್ಯ ಬದಲಾವಣೆಗಳ ಕುರಿತು ಮಹಾರಾಷ್ಟ್ರ ಸರಕಾರವು ಕೇಂದ್ರ ಸರಕಾರಕ್ಕೆ ತಿಳಿಸಲಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು. ಅದರಂತೆ ಮಹಾರಾಷ್ಟ್ರ ಸರಕಾರದಿಂದಲೂ ಪ್ರಕ್ರಿಯೆ ನಡೆಯುತ್ತಿದೆ.
ಸಂಪಾದಕೀಯ ನಿಲುವುಕಾನೂನು ಆಧಾರದಿಂದ ಯುವಕರನ್ನು ಜೂಜಿನತ್ತ ಆಕರ್ಷಿಸುವ ಆನ್ಲೈನ್ ಆಟಗಳನ್ನು ನಿಷೇಧಿಸಲು ಸರಕಾರವು ಕಾರ್ಯತಂತ್ರದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath