ಸಾಬರಕಾಂಠಾ (ಗುಜರಾತ) ಇಲ್ಲಿ ಮುಸಲ್ಮಾನರ ಸಮೂಹದಿಂದ ಹಿಂದೂ ಕುಟುಂಬದ ಮೇಲೆ ನಡೆಸಿದ ದಾಳಿಯಲ್ಲಿ ಒಬ್ಬನ ಸಾವು !

ಹಣದ ವಿವಾದದಿಂದ ಹಲ್ಲೆ

ಸಾಬರಕಾಂಠಾ (ಗುಜರಾತ) – ಇಲ್ಲಿಯ ಖೋಡಿಯಾರ ಕುವ ಮೋತಾಮಧ ಪ್ರದೇಶದಲ್ಲಿ ಹಣದ ವಿವಾದದಿಂದ ಮುಸಲ್ಮಾನರ ಸಮೂಹವು ಹಿಂದೂ ಕುಟುಂಬದ ಮೇಲೆ ಲಾಠಿ ಮತ್ತು ಕಬ್ಬಿಣದ ರಾಡ್‌ಗಳಿಂದ ನಡೆಸಿದ ದಾಳಿಯಲ್ಲಿ ರಾಜು ಭೋಯಿ ಕಾಂತಿ ಬೋಯಿ ರಾಥೋಡ್ ಹತರಾಗಿದ್ದಾರೆ. ಈ ಘಟನೆ ಫೆಬ್ರವರಿ ೧೪ ರಂದು ರಾತ್ರಿ ೧೦ ನಂತರ ಘಟಿಸಿದೆ. ಈ ಘಟನೆಯ ನಂತರ ಪೊಲೀಸರು ೩೦ ಜನರ ಮೇಲೆ ದೂರು ದಾಖಲಿಸಿದ್ದಾರೆ. ಈ ಘಟನೆಯಿಂದ ಅಲ್ಲಿಯ ಎಲ್ಲಾ ಮಾರುಕಟ್ಟೆ ಮುಚ್ಚಲಾಗಿವೆ.

೧. ದಾಳಿ ಮಾಡಿದ ಮುಸಲ್ಮಾನರು ಭಟ್ಟಿವಾಲಾ ಮತ್ತು ಜಂಬುಚೋರ ಪ್ರದೇಶದ ನಿವಾಸಿಗಳಾಗಿದ್ದಾರೆ. ಈ ಗುಂಪಿನಿಂದ ರಾಜು ಭೋಯಿ ಕಾಂತಿ ಬೋಯಿ ರಾಥೋಡ್ ಇವರನ್ನು ಮನೆಯಿಂದ ಎಳೆದು ಹೊರತಂದು ತಲೆಯ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದಾರೆ. ಈ ಸಮಯದಲ್ಲಿ ವಾಹನವನ್ನು ಧ್ವಂಸ ಮಾಡಿದ್ದಾರೆ. ಗುಂಪಿನಿಂದ ಹಲ್ಲೆಯ ಮೊದಲು ಇಲ್ಲಿಯ ದಾರಿದೀಪಗಳನ್ನು ಆರಿಸಿರುವ ದಾವೆ ಕೇಳಿ ಬರುತ್ತಿದೆ.

೨. ಅಯಾಜ್ ಕುರೇಶಿ, ಮುನಾಫ್ ಕುರೇಶಿ, ಆಯುಬ ಕುರೇಶಿ, ರಶೀದ್ ಮಿಯಾ, ಇಮ್ರಾನ್ ಮಿಯಾ ಕುರೇಶಿ, ಮಕಬುಲ ಮಿಯಾ ಕುರೇಶಿ, ಜಾನಿ ಕಮರ್ದ್ದೀನ್, ರಯಿಸ್ ಮಿಯಾ, ಮೆಹಬೂಬ್ ಖಾನ್, ಮಲೇಕ, ಸಮೀರ, ಮನನ ಹಾರುಣ, ನಿಸಾರ್ ಭಾಯಿ, ರಫೀಕ್ ಬಟ್ಟೆ, ನಿಸಾರ್ ಮಿಯಾ, ಬಾಬು ಅಕ್ಬರ್ ಮುಂತಾದ ಆರೋಪಿಗಳ ಮೇಲೆ ದೂರು ದಾಖಲವಾಗಿದೆ.

೩. ಬಜರಂಗದಳದವರು ರಾಜು ಭೊಯಿ ಕಾಂತಿ ಬೋಯಿ ರಾಥೋಡ್ ಇವರ ಮನೆಯ ಮೇಲೆ ಕೂಡ ಮುಸಲ್ಮಾನರು ಕಲ್ಲುತೂರಾಟ ಮಾಡಿರುವ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ಮನೆಯ ಮೇಲೆ ಬುಲ್ಡೋಜರ್ ನಡೆಸಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸುತ್ತಿವೆ.

ಸಂಪಾದಕೀಯ ನಿಲುವು

ಗುಜರಾತ್‌ನಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ಹಲ್ಲೆ ನಡೆಸುವ ಧೈರ್ಯ ಹೇಗೆ ಬರುತ್ತದೆ ಎಂದು ಹಿಂದುಗಳಿಗೆ ಅನಿಸುತ್ತದೆ !