ಕಲ್ಬುರ್ಗಿಯ ಯುವಕ ಸೈಯ್ಯದ್ ಈತನು ‘ಎಕ್ಸ್’ ನಲ್ಲಿ ’ಬಾಬ್ರಿ ಮಸೀದಿಯನ್ನು ಮತ್ತೆ ಅಲ್ಲಿಯೇ ನಿರ್ಮಿಸೋಣ!’ ಎಂದು ಬರೆದ !

ಯುವಕನ ವಿರುದ್ಧ ಪ್ರಕರಣ ದಾಖಲು

ಕಲ್ಬುರ್ಗಿ – ಬಾಬ್ರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟೇ ಸಮಯ ಕಳೆದರೂ ಬಾಬ್ರಿ ಮಸೀದಿ ಇರುವ ಜಾಗದಲ್ಲಿ ಮತ್ತೆ ದೊಡ್ಡ ಮಸೀದಿ ಕಟ್ಟುತ್ತೇವೆ ಎಂದು ೨೩ರ ಹರೆಯದ ಸೈಯದ್ ಮೊಹಿನ್ ಫೈಸಲ್ ಎಂಬಾತ ಹಿಂದುದ್ವೇಷಿ ಹೇಳಿಕೆ ನೀಡಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು; ಆದರೆ ಅವರು ಅವನನ್ನು ಪ್ರಶ್ನಿಸಿ ಬಿಡುಗಡೆ ಮಾಡಿದರು. ಆದರೆ ಇದೀಗ ಅವನ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆ ಹಾಳು ಮಾಡುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣದಲ್ಲಿ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಪಾದಕರ ನಿಲುವು

* ಭಾರತದ ಸಂವಿಧಾನಕ್ಕೆ ಸವಾಲಾಗಿರುವ ಇಂತಹ ಮಾನಸಿಕತೆಯನ್ನು ಶಾಶ್ವತವಾಗಿ ಹತ್ತಿಕ್ಕಲು ಕೇಂದ್ರ ಸರಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ?