
ಬೆಂಗಳೂರು – ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲಾನ ಮೂರ್ತಿಗಾಗಿ ಉಪಯೋಗಿಸಿರುವ ಕಲ್ಲು ಯಾವ ವ್ಯಕ್ತಿ ನೀಡಿದ್ದರು, ಅವರಿಗೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದಿಂದ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ೮೦ ಸಾವಿರ ರೂಪಾಯಿ ದಂಡ ವಿಧಿಸಿದೆ. ಶ್ರೀನಿವಾಸ ನಟರಾಜ ಎಂದು ಅವರ ಹೆಸರಾಗಿದ್ದು ಅವರು ಗಣಿಗಾರಿಕೆಯ ಕಾಂಟ್ರಾಕ್ಟ್ ಪಡೆದಿದ್ದರು. ಸರಕಾರವು ವಿಧಿಸಿರುವ ದಂಡ ಪಾವತಿಸಲು ನಟರಾಜ ಇವರು ಅವರ ಪತ್ನಿಯ ಆಭರಣಗಳನ್ನು ಕೂಡ ಒತ್ತೆ ಇಟ್ಟಿದ್ದಾರೆ.
೧. ನಟರಾಜ ಹಾರೋಹಳ್ಳಿ ಗುಜ್ಜೆ ಗೌಡನಪುರ ಗ್ರಾಮದವರಾಗಿದ್ದು ಅವರು ರಾಮದಾಸ ಎಂಬ ರೈತನ ಹೊಲದಲ್ಲಿನ ಬಂಡೆ ತೆಗೆಯುವ ಕಾಂಟ್ರಾಕ್ಟ್ ಪಡೆದಿದ್ದರು. ಈ ಭೂಮಿಯ ಒಂದು ದೊಡ್ಡ ಬಂಡೆ ನಟರಾಜ ಇವರು ೩ ಭಾಗವಾಗಿ ವಿಂಗಡಿಸಿದ್ದರು ,ಇದರಲ್ಲಿನ ಒಂದು ಬಂಡೆ ಶ್ರೀ. ಅರುಣ ಯೋಗಿರಾಜ ಇವರು ಶ್ರೀರಾಮಲಲ್ಲಾನ ಮೂರ್ತಿಗಾಗಿ ಆರಿಸಿಕೊಂಡರು.
೨. ನಟರಾಜ ಅವರು, ನಾನು ಕೇವಲ ಬಂಡೆ ಸ್ವಚ್ಛಗೊಳಿಸಿದ್ದೆ ; ಆದರೆ ಗಣಿಗಾರಿಕೆ ಮತ್ತು ಭೂಗರ್ಭ ಶಾಸ್ತ್ರ ಇಲಾಖೆಯಿಂದ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಮಾಡುತ್ತಾ ದಂಡ ವಿಧಿಸಿದರು. ಈ ಪ್ರಕರಣದಲ್ಲಿ ನನಗೆ ಯಾರಾದರೂ ಸಹಾಯ ಮಾಡುವರು ಎಂದು ನಾನು ಎದುರು ನೋಡುತ್ತಿದ್ದೇನೆ.
ಯಾವ ಭೂಮಿಯಿಂದ ಶ್ರೀರಾಮಲಲ್ಲಾನ ಮೂರ್ತಿಗಾಗಿ ಬಂಡೆ ದೊರೆತಿದೆ ಅಲ್ಲಿ ಕೂಡ ಶ್ರೀರಾಮಮಂದಿರ ಕಟ್ಟುವರು !
ರಾಮದಾಸ ಎಂಬ ೭೦ ವರ್ಷದ ದಲಿತ ಕೃಷಿಕನ ಮಾಲೀಕತ್ವದ ಭೂಮಿಯಿಂದ ಈ ಬಂಡೆ ತೆಗೆದಿದ್ದರೆ. ಈಗ ಅಲ್ಲಿ ಶ್ರೀರಾಮನ ಮಂದಿರ ಕಟ್ಟುವರು. ರಾಮದಾಸ ಇವರು, ಇಲ್ಲಿ ದಕ್ಷಿಣಕ್ಕೆ ಆಂಜನೇಯನ ದೇವಸ್ಥಾನ ಇರುವುದು . ಯಾವ ಭೂಮಿಯಿಂದ ಶ್ರೀರಾಮಲಲ್ಲಾನ ಮೂರ್ತಿಗಾಗಿ ಬಂಡೆ ತೆಗೆದಿದ್ದಾರೆ, ಆ ಜಾಗದ ಕಡೆಗೆ ಆಂಜನೇಯ ನೋಡುತ್ತಿದ್ದಾನೆ. ಆದ್ದರಿಂದ ನಾನು ಇಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟುವುದಕ್ಕಾಗಿ ೪ ಗುಂಟೆ ಭೂಮಿಯನ್ನು ದಾನ ನೀಡುವ ನಿರ್ಣಯ ತೆಗೆದುಕೊಂಡಿದ್ದೇನೆ. ಈ ದೇವಸ್ಥಾನಕ್ಕಾಗಿ ಶ್ರೀರಾಮನ ಮೂರ್ತಿ ಕೆತ್ತುವುದಕ್ಕಾಗಿ ನಾವು ಶ್ರೀ ಅರುಣ ಯೋಗಿರಾಜ ಇವರನ್ನು ಭೇಟಿ ಮಾಡುವೆವು ಎಂದು ಹೇಳಿದರು.
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ