Gyanvapi Success : ಜ್ಞಾನವಾಪಿಯ ಜಾಗದಲ್ಲಿ ಹಿಂದೆ ದೊಡ್ಡ ದೇವಸ್ಥಾನವಿತ್ತು ! – ಭಾರತೀಯ ಪುರಾತತ್ವ ಇಲಾಖೆಯ ವರದಿ

ಭಾರತೀಯ ಪುರಾತತ್ವ ಇಲಾಖೆಯ ವರದಿ ಬಹಿರಂಗ !

ವಾರಣಾಸಿ (ಉತ್ತರ ಪ್ರದೇಶ) – ಜ್ಞಾನವಾಪಿ ಸ್ಥಳದಲ್ಲಿ ಹಿಂದೆ ಒಂದು ದೊಡ್ಡ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವರದಿ ಬಹಿರಂಗಪಡಿಸಿದೆ. ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಹಿರಂಗಪಡಿಸಿದರು. ಈ ದೇವಾಲಯವನ್ನು ಕೆಡವಲಾಯಿತು ಮತ್ತು ಅದರ ಕಂಬಗಳನ್ನು ಅಲ್ಲಿ ಮಸೀದಿ ನಿರ್ಮಿಸಲು ಬಳಸಲಾಯಿತು ಎಂದು ಅವರು ಹೇಳಿದರು.

ಆದ್ದರಿಂದ ಈ ಸ್ಥಳದಲ್ಲಿ ವಿಶ್ವನಾಥನ ದೇವಾಲಯವಿತ್ತು ಮತ್ತು ಮಸೀದಿಯನ್ನು ನಿರ್ಮಿಸಲು ಅದನ್ನು ಕೆಡವಲಾಯಿತು, ಎಂಬುದು ಸಿದ್ಧವಾಗುತ್ತದೆ ಎಂದು ಹೇಳಲಾಗುತ್ತದೆ.