ತಮಿಳುನಾಡಿನಲ್ಲಿನ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಮಂತ್ರಿ ಮೋದಿ !

ಚೆನ್ನೈ (ತಮಿಳುನಾಡು) – ಶ್ರೀರಾಮ ಮಂದಿರದ ವಿಶೇಷ ಯಜಮಾನ ಇರುವ ಪ್ರಧಾನಮಂತ್ರಿ ನರೇಂದ್ರ ಮೋದಿ ೧೧ ದಿನದ ಅನುಷ್ಠಾನ ಮಾಡುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಅವರು ದಕ್ಷಿಣ ಭಾರತದಲ್ಲಿನ ವಿವಿಧ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುತ್ತಿದ್ದಾರೆ. ಜನವರಿ ೨೦ ರಂದು ಪ್ರಧಾನಮಂತ್ರಿ ಮೋದಿ ತಮಿಳುನಾಡಿನಲ್ಲಿನ ತಿರುಚಿನಪಲ್ಲಿ ನಗರದಲ್ಲಿನ ಶ್ರೀರಂಗಂ ಇಲ್ಲಿಯ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿದರು. ಅವರು ಆನೆಗೆ ಬೆಲ್ಲ ತಿನಿಸಿ ಆಶೀರ್ವಾದ ಪಡೆದರು. ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮೋದಿ ಶ್ರೀ ರಾಮಾಯಣ ಪಾರಾಯಣ ಕಾರ್ಯಕ್ರಮದಲ್ಲಿ ಸಹಭಾಗಿ ಆದರು.