ಯಾವುದೇ ಕ್ಷಣದಲ್ಲಿ ಹಿಂದೂ ರಾಷ್ಟ್ರದ ಘೋಷಣೆ ಸಾಧ್ಯ ! – ಶ್ರೀ ಮಹಂತ ಹರಿ ಗಿರೀಜಿ ಮಹಾರಾಜ, ಅಂತಾರಾಷ್ಟ್ರೀಯ ಸಂರಕ್ಷಕರು, ಶ್ರೀ ಪಂಚದಶನಾಮ ಜೂನಾ ಅಖಾಡಾ

ಅಯೋಧ್ಯೆಯಿಂದ ‘ಸನಾತನ ಪ್ರಭಾತ’ನ ವಿಶೇಷ ವರದಿ

ಅಯೋಧ್ಯೆ – ಅಯೋಧ್ಯೆಯಲ್ಲಿ ಈಗ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಆದ್ದರಿಂದ ಹಿಂದೂಗಳು ಈಗ ಸಿದ್ಧರಾಗಿರಬೇಕು; ಏಕೆಂದರೆ ಈಗ ಯಾವುದೇ ಕ್ಷಣದಲ್ಲಿ ಹಿಂದೂ ರಾಷ್ಟ್ರ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಶ್ರೀ ಪಂಚದಶನಾಮ ಜೂನಾ ಆಖಾಡಾದ ಅಂತಾರಾಷ್ಟ್ರೀಯ ಸಂರಕ್ಷಕ ಶ್ರೀ ಮಹಂತ ಹರಿ ಗಿರೀಜಿ ಮಹಾರಾಜರು ಇಲ್ಲಿ ಹೇಳಿದರು. ಮಹಾರಾಜರು ಮತ್ತು ಅವರ ಎಲ್ಲಾ ಭಕ್ತರು ಇಲ್ಲಿನ ಪ್ರಸಿದ್ಧ ಶ್ರೀ ನಾಗೇಶ್ವರನಾಥ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬಂದಿದ್ದರು. ಆ ಸಮಯದಲ್ಲಿ ಅವರು ಸನಾತನ ಪ್ರಭಾತ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದರು. ಶ್ರೀ ಮಹಂತ ಹರಿ ಗಿರೀಜಿ ಮಹಾರಾಜ ಅವರು ಮಾತನಾಡುತ್ತಾ, “ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿರುವುದರಿಂದ, ಎಲ್ಲಾ ಹಿಂದೂಗಳು ಹಿಂದೂ ರಾಷ್ಟ್ರವನ್ನು ಸ್ವಾಗತಿಸಲು ಸಿದ್ಧರಾಗಿರಬೇಕು. ಮನೆ ಮನೆಗಳಲ್ಲಿ ದೀಪಗಳನ್ನು ಹಚ್ಚಬೇಕು ಹಾಗೆಯೇ ದೊಡ್ಡ ಪ್ರಮಾಣದಲ್ಲಿ ದೀಪೋತ್ಸವವನ್ನು ಆಚರಿಸಬೇಕು.’ ಎಂದು ಹೇಳಿದರು.