
ಅಯೋಧ್ಯೆ (ಉತ್ತರಪ್ರದೇಶ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮತ್ತೆ ಸಿಗಬೇಕು; ಅದಕ್ಕಾಗಿ ನಾವು ಯಜ್ಞ ಆರಂಭಿಸಿದ್ದೇವೆ. ತ್ರೆತಾಯುಗದ ನಂತರ ಈಗ ಮಾಡುತ್ತಿರುವ ನಿಷ್ಕಾಮ ಯಜ್ಞ ಆಗಿದೆ. ಪ್ರತಿಯೊಂದು ಯಾವುದಾದರೂ ವಿಶಿಷ್ಟ ಇಚ್ಛೆಯಿಂದ ಮಾಡಲಾಗುತ್ತದೆ; ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಬೇಕು, ಇದು ನಮ್ಮ ಇಚ್ಛೆಯಾಗಿದೆ. ನಮಗೆ ನಂಬಿಕೆ ಇದೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದಲ್ಲಿ ವಿಲೀನವಾಗುವುದು. ನಮಗೆ ಶ್ರೀ ಹನುಮಂತನ ಮೇಲೆ ಬಲವಾದ ಶ್ರದ್ಧೆ ಇದೆ. ಶ್ರೀ ಹನುಮಂತನು ಮಾತಾ ಸೀತೆಯನ್ನು ಹುಡುಕಿದನು, ಅವರನ್ನು ಹಿಂತರುವುದಕ್ಕಾಗಿ ಪ್ರಭು ಶ್ರೀ ರಾಮನಿಗೆ ಸಹಾಯ ಮಾಡಿದನು. ಇಷ್ಟು ಮಹಾನಕಾರ್ಯ ಮಾಡುವ ಶ್ರೀ ಹನುಮಂತನಿಗಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿಸುವುದು ಬಹಳ ದೊಡ್ಡ ವಿಷಯವೇನು ಅಲ್ಲ ? ಅವರು ನಮ್ಮ ಭೂಮಿ ಕೂಡ ಹಿಂತಿರುಗಿ ತರುವರು, ಎಂದು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಇವರು ಹೇಳಿಕೆ ನೀಡಿದರು.
ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಮಾತು ಮುಂದುವರೆಸಿ, ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಶಾಸ್ತ್ರಕ್ಕನುಸಾರವಾಗಿ ನಡೆಯುತ್ತಿದೆ. ಶ್ರೀರಾಮ ಮಂದಿರದ ಗರ್ಭಗುಡಿ ಕಟ್ಟಲಾಗಿದೆ. ಅದು ಪೂರ್ಣವಾಗಿದೆ. ಆದ್ದರಿಂದ ಅಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಈಗ ಶ್ರೀ ರಾಮನ ಹೊರಗಿನ ಮಂದಿರ ಕಟ್ಟಲಾಗುವುದು. ಪುನರ್ವಸು ನಕ್ಷತ್ರ ಕೂಡ ಇದೆ. ತ್ರೆತಾಯುಗದ ಛಾಯೆ ಕೂಡ ಇದೆ. ಯೋಗ್ಯ ಸಮಯದಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಆಗುತ್ತಿದೆ. ‘ನಮ್ಮ ದೇಶದ ಪ್ರಧಾನ ಮಂತ್ರಿ ೧೧ ದಿನ ಕೇವಲ ಹಾಲು ಆಹಾರವಾಗಿ ತೆಗೆದುಕೊಳ್ಳುತ್ತಿದ್ದಾರೆ. ೧೧ ದಿನ ಅವರು ಅನ್ನ ಸೇವಿಸುವುದಿಲ್ಲ. ಇಂತಹ ಪ್ರಧಾನಮಂತ್ರಿಯನ್ನು ನೀವು ನೋಡಿದ್ದೀರಾ ?’, ಎಂದು ಅವರು ಪ್ರಶ್ನೆ ಕೂಡ ಕೇಳಿದರು.
(ಸೌಜನ್ಯ:ANI News)
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ