ಕಮ್ಯುನಿಸ್ಟ್ ಪಕ್ಷಗಳ ಬೆಂಬಲದೊಂದಿಗೆ, ಶ್ರೀ ಕಾನಿಫ್ನಾಥ್ ಮಹಾರಾಜರ ವಿಗ್ರಹವನ್ನು ತೆಗೆಯಲು ಮತಾಂಧರಿಂದ ಉಪವಾಸ ಸತ್ಯಾಗ್ರಹ !

ನಗರ – ರಾಹುರಿ ತಾಲೂಕಿನ ಗುಹಾದಲ್ಲಿರುವ ಶ್ರೀ ಕಾನಿಫ್ನಾಥ್ ದೇವಸ್ಥಾನವನ್ನು ಕಮ್ಯುನಿಸ್ಟ್ ಪಕ್ಷದ ಸಹಾಯದಿಂದ ಮುಸ್ಲಿಮರು ವಕ್ಫ್ ಬೋರ್ಡ್ನ ಆಸ್ತಿ ಎಂದು ಹೇಳಿಕೊಂಡರು. (ಹಿಂದೂ ಧರ್ಮದ ವಿರುದ್ಧ ಮತಾಂಧರನ್ನು ಬೆಂಬಲಿಸುವ ಕಮ್ಯುನಿಸ್ಟ್ ಪಕ್ಷಗಳ ಕುತಂತ್ರ ತಿಳಿಯಿರಿ ! – ಸಂಪಾದಕರು) ಇಲ್ಲಿನ ಶ್ರೀ ಕಾನಿಫ್ನಾಥ್ ಮಹಾರಾಜರ ಪ್ರತಿಮೆಯನ್ನು ತೆಗೆಯುವಂತೆ ಕೆಲವು ಮುಸ್ಲಿಂ ಸಮುದಾಯದವರು ಉಪವಾಸ ಆರಂಭಿಸಿದ್ದಾರೆ. ಹೀಗಿರುವಾಗ ಆದಿವಾಸಿ ಏಕಲವ್ಯ ಸಂಘಟನೆ ಹಾಗೂ ವಾದರ್ ಸಮಾಜ ಸಂಘಟನೆಗಳು ‘ಈ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು’ ಎಂಬ ದೃಢ ನಿಲುವು ತಳೆದಿವೆ. ಈ ಸಂಘಟನೆಗಳೊಂದಿಗೆ ಇಡೀ ಹಿಂದೂ ಸಮುದಾಯವು ದೇವಾಲಯದ ರಕ್ಷಣೆಗಾಗಿ ಬೀದಿಗಿಳಿಯಲು ಮುಂದಾಗಿದೆ.
ಏನಿದು ಪ್ರಕರಣ ?
ವಕ್ಫ್ ಬೋರ್ಡ್ ಮೂಲಕ ಈ ದೇಗುಲದ ನಿವೇಶನವನ್ನು ಕಬಳಿಸಲು ಮತಾಂಧರು ಪ್ರಯತ್ನಿಸುತ್ತಿದ್ದಾರೆ. ನವೆಂಬರ್ 13, 2023 ರಂದು, ಕೆಲವು ಮುಸ್ಲಿಂ ದುಷ್ಕರ್ಮಿಗಳು ಈ ದೇವಾಲಯದಲ್ಲಿ ಭಜನೆ ಮಾಡುತ್ತಿದ್ದ ಭಕ್ತರ ಮೇಲೆ ಹಲ್ಲೆ ನಡೆಸಿ ಥಳಿಸಿದ್ದಾರೆ. ಇದನ್ನು ವಿರೋಧಿಸಿ ನವೆಂಬರ್ 21 ರಂದು ಎಲ್ಲಾ ಧಾರ್ಮಿಕ ಹಿಂದೂಗಳು ತಹಸಿಲ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ 28 ಡಿಸೆಂಬರ್ 2023 ರಂದು, ಹಿಂದೂ ಸಮುದಾಯದಿಂದ ಈ ದೇವಾಲಯದಲ್ಲಿ ಕನಿಫ್ನಾಥ್ ಮಹಾರಾಜರ ವಿಗ್ರಹವನ್ನು ಸ್ಥಾಪಿಸಲಾಯಿತು.
ಸಂಪಾದಕೀಯ ನಿಲುವುಇಂತಹ ಉಪವಾಸ ಸತ್ಯಾಗ್ರಹಿಗಳಿಗೆ ತಲೆಬಾಗದೆ ಸರಕಾರಿ ವ್ಯವಸ್ಥೆಗಳು ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಹಿಂದೂಗಳು ನಿರೀಕ್ಷಿಸುತ್ತಾರೆ ! ಶ್ರೀ ಕಾನಿಫ್ನಾಥ್ ದೇವಸ್ಥಾನವನ್ನು ಹಿಂದೂಗಳ ಆಸ್ತಿ ಎಂದು ಘೋಷಿಸುವವರೆಗೆ, ಎಲ್ಲೆಡೆ ಹಿಂದೂಗಳು ದೇವಸ್ಥಾನದ ಪರವಾಗಿ ಒಗ್ಗಟ್ಟಾಗಿ ನಿಲ್ಲಬೇಕು ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!