
ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಭವ್ಯ ಶ್ರೀರಾಮ ಮಂದಿರದಲ್ಲಿ ಸ್ಥಾಪಿಸಲಾಗುವ ಶ್ರೀರಾಮ ಮೂರ್ತಿಗಾಗಿ ಒಟ್ಟು ೩ ಮೂರ್ತಿಗಳು ಕೆತ್ತಲಾಗಿದೆ. ಗಣೇಶ ಭಟ್ಟ, ಸತ್ಯನಾರಾಯಣ ಪಾಂಡೆ ಮತ್ತು ಅರುಣ ಯೋಗಿರಾಜ ಈ ೩ ಶಿಲ್ಪಿಗಳು ಇವುಗಳನ್ನು ಕೆತ್ತಿದ್ದಾರೆ. ಇದರಲ್ಲಿನ ಒಂದು ಮೂರ್ತಿಯ ಆಯ್ಕೆ ಮಾಡಲಾಗಿದೆ; ಆದರೆ ಅದರ ಅಧಿಕೃತ ಮಾಹಿತಿ ಇಲ್ಲಿಯವರೆಗೆ ನೀಡಲಾಗಿಲ್ಲ. ಈ ಮೂರ್ತಿಗಳು ಯಾವ ಸ್ಥಳದಲ್ಲಿ ಕೆತ್ತಲಾಗಿದ್ದವು ಅಲ್ಲಿ ಬೆಳಗ್ಗೆ ಮತ್ತು ಸಂಜೆ ವೇದಮೂರ್ತಿ ವೇದ ಮಂತ್ರ ಪಾರಾಯಣ ಮಾಡುತ್ತಿದ್ದರು, ಎಂದು ಈಗ ಮಾಹಿತಿ ಬೆಳಕಿಗೆ ಬಂದಿದೆ. ೬ ತಿಂಗಳಿಂದ ಈ ಮೂರ್ತಿ ಕೆತ್ತನೆಯ ಕಾರ್ಯ ಆರಂಭವಾಗಿತ್ತು. ಈ ಸಮಯದಲ್ಲಿ ಈ ವೇದ ಮಂತ್ರ ಪಾರಾಯಣ ಮಾಡಲಾಗುತ್ತಿತ್ತು. ಈ ವಿಷಯವಾಗಿ ಶಿಲ್ಪಿಗಳು, ಮಂತ್ರ ಪಠಣ ಮಾಡಿರುವುದರಿಂದ ಅಲ್ಲಿಯ ವಾತಾವರಣ ಪವಿತ್ರವಾಗಿತ್ತು ಎಂದು ಹೇಳಿದರು.
Updates on #AyodhyaRamMandir
— Idols of Shri Ram were being made amidst an atmosphere filled with #VedicChants!
— The idol will undergo Jal Abhishek with water from a silver vessel containing 1,000 holes
— Mixture of Cardamom and sugar will be given as prasad!
— Sanatan Prabhat (@SanatanPrabhat) January 4, 2024
೧ ಸಾವಿರ ರಂದ್ರಗಳಿರುವ ಬೆಳ್ಳಿಯ ಪಾತ್ರೆಯಿಂದ ಮೂರ್ತಿಗೆ ಜಲ ಅಭಿಷೇಕ !
ಶ್ರೀರಾಮ ಮಂದಿರದಲ್ಲಿನ ಗರ್ಭಗೃಹದಲ್ಲಿ ಸ್ಥಾಪಿತವಾಗುವ ಶ್ರೀ ರಾಮ ಮೂರ್ತಿಗೆ ೧ ಸಾವಿರ ರಂದ್ರ ಇರುವ ಬೆಳ್ಳಿಯ ಪಾತ್ರೆಯಿಂದ ಜಲಾಭಿಷೇಕ ಮಾಡಲಾಗುವುದು. ಸಂಪೂರ್ಣ ಪೂಜೆಗಾಗಿ ಕಾಶಿಯಿಂದ ಸಾಹಿತ್ಯ ಸಿದ್ಧಪಡಿಸಲಾಗಿದೆ. ಮಂದಿರದ ಪರಿಸರದಲ್ಲಿ ಈಶಾನ್ಯ ಮೂಲೆಯಲ್ಲಿ ಮಂಟಪ ಸಿದ್ದಗೊಳಿಸಿದ್ದು ಅದರಲ್ಲಿ ಎರಡು ಅಡಿ ಆಳ ಮತ್ತು ಅಗಲ ಇರುವ ೯ ಕುಂಡಗಳು ತಯಾರಿಸಲಾಗಿದೆ. ಯಜ್ಞದಲ್ಲಿ ತುಪ್ಪ ಮತ್ತು ಸಮೇಧೆ ಅರ್ಪಿಸುವುದಕ್ಕಾಗಿ ಮಾವಿನ ಕಟ್ಟಿಗೆಯಿಂದ ಸಲಕರಣೆಗಳನ್ನು ತಯಾರಿಸಲಾಗಿದೆ.
ಪ್ರಸಾದದಲ್ಲಿ ಏಲಕ್ಕಿ ನೀಡುವರು !
ಪ್ರಾಣಪ್ರತಿಷ್ಠಾಪನೆಯ ಸಮಯದಲ್ಲಿ ಬರುವ ದೇಶದಲ್ಲಿನ ೮ ಸಾವಿರ ಗಣ್ಯರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಸಮಯದಲ್ಲಿ ಏಲಕ್ಕಿ ಪ್ರಸಾದ ನೀಡುವರು. ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ಇದಕ್ಕಾಗಿ ೫ ಲಕ್ಷ ಪ್ಯಾಕೆಟ್ ಗಳ ಬೇಡಿಕೆ ನೀಡಲಾಗಿದೆ. ಇನ್ನೊಂದು ಕಡೆಗೆ ಪ್ರಾಣ ಪ್ರತಿಷ್ಠಾಪನೆಯ ಮಹಾಪ್ರಸಾದಕ್ಕಾಗಿ ಮೆಹೆಂದಿಪುರ ಬಾಲಾಜಿ ಇಲ್ಲಿಂದ ೨ ಲಕ್ಷ ಉಂಡೆ ಪ್ಯಾಕೆಟ್ ಕಳುಹಿಸಲಾಗುವುದು.
ಛತ್ತಿಸ್ಗಢ ಸರಕಾರದಿಂದ ಜನವರಿ ೨೨ ರಂದು ಮದ್ಯ ನಿಷೇಧ ದಿನ ಎಂದು ಘೋಷಣೆ !
ಛತ್ತೀಸ್ಗಡದಲ್ಲಿ ಜನವರಿ ೨೨ ರಂದು ಪ್ರಾಣಪ್ರತಿಷ್ಠೆಯ ದಿನ ಮದ್ಯ ನಿಷೇಧ (ಡ್ರೈ ಡೆ) ಇರುವುದು. ಛತ್ತೀಸ್ಗಡದ ಮುಖ್ಯಮಂತ್ರಿ ವಿಷ್ಣುದೇವ ಸಾಯ ಇವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !