ಭಯೋತ್ಪಾದಕರಿಂದ ಕಾಶ್ಮೀರದ ಅಖನೂರ ಸೆಕ್ಟರ್ ನಲ್ಲಿ ನುಸಳುವ ಪ್ರಯತ್ನ !

  • ೧ ಭಯೋತ್ಪಾದಕ ಹತ, ಇತರ ಮೂವರು ಪರಾರಿ !

  • ಚೀನಾ ಮತ್ತು ಪಾಕಿಸ್ತಾನದಿಂದ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಯ ಷಡ್ಯಂತ್ರ

ಜಮ್ಮು (ಜಮ್ಮು ಕಾಶ್ಮೀರ) – ಜಮ್ಮು ಕಾಶ್ಮೀರದಲ್ಲಿನ ಅಖನೂರನ ಐ.ಬಿ. ಸೆಕ್ಟರ್ ನಲ್ಲಿ ಜಿಹಾದಿ ಭಯೋತ್ಪಾದಕರ ನುಸಳುವ ಪ್ರಯತ್ನವನ್ನು ಭಾರತೀಯ ಸೈನ್ಯ ವಿಫಲಗೊಳಿಸಿದೆ. ಇದರಲ್ಲಿ ೧ ಭಯೋತ್ಪಾದಕ ಹತನಾಗಿದ್ದಾನೆ. ಇತರ ೩ ಭಯೋತ್ಪಾದಕರು ಶವವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಕಾಶ್ಮೀರದ ಪುಂಛ ಮತ್ತು ರಾಜೌರಿ ಸೆಕ್ಟರ್ ನಲ್ಲಿ ೨೫ ರಿಂದ ೩೦ ಪಾಕಿಸ್ತಾನಿ ಭಯೋತ್ಪಾದಕರು ಸಕ್ರಿಯವಾಗಿರುವದರ ಬಗ್ಗೆ ಅನುಮಾನವಿದೆ. ಅವರು ಇಲ್ಲಿಯ ಕಾಡಿನಲ್ಲಿ ಮತ್ತು ಗುಹೆಗಳಲ್ಲಿ ಅಡಗಿ ಕುಳಿತಿದ್ದಾರೆ. ಚೀನಾ ಮತ್ತು ಪಾಕಿಸ್ತಾನ ಇವರು ಈ ಭಯೋತ್ಪಾದಕರಿಗೆ ಭಾರತದಲ್ಲಿ ಚಟುವಟಿಕೆ ನಡೆಸುವುದಕ್ಕಾಗಿ ಕಳುಹಿಸುತ್ತಿದೆ ಎಂದು ಸೂತ್ರಗಳ ಅಭಿಪ್ರಾಯವಾಗಿದೆ. ಇದರಿಂದ ಚೀನಾ ಭಾರತೀಯ ಸೈನಿಕರ ಗಮನ ಲಡಾಖ್‌ನಿಂದ ಬೇರೆ ಕಡೆ ಹರಿಸಿ ಅದರ ದುರುಪಯೋಗ ಮಾಡಿಕೊಳ್ಳಬಹುದು.