ನವಿ ಮುಂಬಯಿ ಮತ್ತು ಮುಂಬ್ರಾದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 3 ಬಾಂಗ್ಲಾದೇಶಿ ಪ್ರಜೆಗಳ ಬಂಧನ !

ಠಾಣೆ, ಡಿಸೆಂಬರ್ 23 (ಸುದ್ದಿ) – ನವಿ ಮುಂಬಯಿ ಮತ್ತು ಮುಂಬ್ರಾದಲ್ಲಿ ಅಕ್ರಮವಾಗಿ ನೆಲೆಸಿದ್ದ 3 ಬಾಂಗ್ಲಾದೇಶಿ ಪ್ರಜೆಗಳನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಬಂಧಿತ ಬಾಂಗ್ಲಾದೇಶಿಗಳನ್ನು ನವಿ ಮುಂಬಯಿನ ಖಲೀಲ್ ಮೈನುದ್ದೀನ್ ಸೈಯದ್ (30 ವರ್ಷ), ಹಶುಮುಲ್ಲಾ ಹಸನ್ ಶೇಖ್ (22 ವರ್ಷ) ಮತ್ತು ಮುಂಬ್ರಾದ ಸರ್ದಾರ್ ಅಜೀಜ್ ರಾಣಾ ಶೇಖ್ (43 ವರ್ಷ) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕಾಮೋಠೆ ಮತ್ತು ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಭಾರತ-ಬಾಂಗ್ಲಾದೇಶದ ಗಡಿಯಿಂದ ಮಹಾರಾಷ್ಟ್ರದ ನವಿ ಮುಂಬಯಿ ಮತ್ತು ಠಾಣೆ ನಗರಗಳವರೆಗೆ ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಪೊಲೀಸ್ ಅಥವಾ ಭದ್ರತಾ ವ್ಯವಸ್ಥೆಗೆ ಮಾಹಿತಿ ಸಿಗದಿರುವುದು ಭಾರತದ ಭದ್ರತಾ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಬಾಂಗ್ಲಾದೇಶಿ ನುಸುಳುಕೋರರ ತವರೂರಾಗಿರುವ ಭಾರತ !