
ನವ ದೆಹಲಿ – ೨೦೨೪ ರ ಲೋಕಸಭಾ ಚುನಾವಣೆಯ ಮುನ್ನ ಚುನಾವಣಾ ಆಯೋಗದಿಂದ ರಾಜಕೀಯ ಪಕ್ಷಗಳಿಗಾಗಿ ವಿಕಲಾಂಗರ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಸೂಚಿ ಪ್ರಸಾರಗೊಳಿಸಿದೆ. ಪ್ರಚಾರದ ಸಮಯದಲ್ಲಿ ವಿಕಲಾಂಗರಿಗಾಗಿ ಅವಮಾನಾಸ್ಪದ ಭಾಷೆ ಉಪಯೋಗಿಸಬಾರದೆಂದು ಸೂಚಿಸಲಾಗಿದೆ. ಇದರ ಅಂತರ್ಗತ ಮುಗರು, ಹುಚ್ಚರು, ಕುರುಡರು, ಒಕ್ಕಣ್ಣು, ಕಿವುಡರು, ಕುಂಟರು, ಅಶಕ್ತರು ಈ ರೀತಿ ಪದಬಳಿಕೆ ವಿಕಲಾಂಗರಿಗಾಗಿ ಬಳಸಬಾರದೆಂದು ಆಯೋಗದಿಂದ ಪಕ್ಷದವರಿಗೆ ಹೇಳಲಾಗಿದೆ. ಪ್ರಚಾರದ ಸಮಯದಲ್ಲಿ ನಾಯಕರ ಭಾಷಣಗಳಲ್ಲಿ, ಸೋಶಿಯಲ್ ಮೀಡಿಯಾ ಪೋಸ್ಟ್, ಜಾಹೀರಾತು ಮತ್ತು ಪ್ರಸಿದ್ಧಿ ಪತ್ರಕದಲ್ಲಿ ಈ ರೀತಿಯ ಪದಗಳಿಗೆ ಮಾಡಬಾರದು. ಅದರ ಉಲ್ಲಂಘನೆ ಮಾಡುವವರಿಗೆ ವಿಕಲಾಂಗ ವ್ಯಕ್ತಿಯ ಅಧಿಕಾರ ಅಧಿನಿಯಮದ ೨೦೧೬ ರ ಪ್ರಕಾರ ಕಲಾಂ ೯೨ ಅಂತರ್ಗತ ೫ ವರ್ಷವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಪಕ್ಷಗಳಿಂದ ವಿಕಲಾಂಗರನ್ನು ಸದಸ್ಯರನ್ನಾಗಿ ಮಾಡಬೇಕು. ಆದ್ದರಿಂದ ಚುನಾವಣೆಯಲ್ಲಿ ವಿಕಲಾಂಗರ ಸಹಭಾಗ ಹೆಚ್ಚುವುದು, ಆಯೋಗದಿಂದ ಹೀಗೂ ಕೂಡ ಹೇಳಲಾಗಿದೆ.
ಮೇ ೨೦೨೩ ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ವಿಕಲಾಂಗರಿಗೆ ಮನೆಯಲ್ಲಿ ಕುಳಿತು ನೀಡಲಾದ ಮತದಾನದ ಸೌಲಭ್ಯ !
ವಿಕಲಾಂಗರ ಮತದಾನದ ಶೇಕಡವಾರು ಹೆಚ್ಚಾಗಬೇಕು, ಇದಕ್ಕಾಗಿ ಕಳೆದ ಕೆಲವು ಸಮಯದಿಂದ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಅನೇಕ ಪ್ರಯತ್ನ !
ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ಇದಕ್ಕಾಗಿ ವಿಶೇಷ ಸೌಲಭ್ಯದ ಆರಂಭ !
ಇದರ ಅಂತರ್ಗತ ಶೇಕಡ ೪೦ ಕ್ಕಿಂತಲೂ ಹೆಚ್ಚಿನ ವಿಕಲಾಂಗರು ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ !
ವಿಕಲಾಂಗರಿಗೆ ಚುನಾವಣೆಯ ಅಧಿಸೂಚನೆ ಜಾರಿಯಾದ ನಂತರ ೧೫ ದಿನಗಳ ಒಳಗೆ ಒಂದು ಫಾರಂ ತುಂಬುವುದು ಆವಶ್ಯಕವಾಗಿದೆ ! ಅದರ ನಂತರ ಸರಕಾರಿ ಸಿಬ್ಬಂದಿ ಮತದಾನಕ್ಕಾಗಿ ವಿಕಲಾಂಗರ ಮನೆಗೆ ತಲುಪುವರು. ಈ ಪ್ರಕ್ರಿಯೆಯ ಚಿತ್ರೀಕರಣ ಕೂಡ ಮಾಡಲಾಗುವುದು.
ಮಧ್ಯಪ್ರದೇಶ, ಛತ್ತಿಸ್ಗಢ ಮತ್ತು ರಾಜಸ್ಥಾನ ಸಹಿತ ೫ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕೂಡ ಈ ಸೌಲಭ್ಯ ಒದಗಿಸಲಾಗಿತ್ತು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!