|

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಅಯೋಧ್ಯೆಯಲ್ಲಿನ ರಕ್ಷಣಾ ವ್ಯವಸ್ಥೆಯ ಸಂದರ್ಭದಲ್ಲಿ ಇತ್ತೀಚಿಗೆ ಒಂದು ಮಹತ್ವಪೂರ್ಣ ಸಭೆ ಆಯೋಜಿಸಿದ್ದರು. ಇದರಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಆಮಂತ್ರಣವಿಲ್ಲದೆ ಅಯೋಧ್ಯೆಯಲ್ಲಿ ಪ್ರವೇಶ ನಿಷೇಧಿಸಲು ನಿರ್ಣಯಿಸಲಾಗಿದೆ. ಆಮಂತ್ರಣ ಇಲ್ಲದಿರುವವರು ಅಯೋಧ್ಯೆಯಲ್ಲಿನ ಹೋಟೆಲ್ ಮತ್ತು ಅತಿಥಿಗೃಹದಲ್ಲಿ ಕಾದಿರಿಸುವಿಕೆಯನ್ನು ಕೂಡ ರದ್ದುಪಡಿಸಲಾಗುವುದು. ಅಯೋಧ್ಯೆಯಲ್ಲಿ ಆಗುವ ಗದ್ದಲದಿಂದ ವ್ಯವಸ್ಥೆಯ ದೃಷ್ಟಿಯಿಂದ ಸರಕಾರ ಜಾಗರೂಕವಾಗಿದೆ. ಈಗ ಜನವರಿ ೨೨ ರಂದು ಕೇವಲ ಆಮಂತ್ರಿದ ಜನರಷ್ಟೇ ಅಯೋಧ್ಯೆಗೆ ಹೋಗಲು ಸಾಧ್ಯ, ಯಾರ ಬಳಿ ಆಯೋಜನ ಸಮಿತಿಯ ಆಮಂತ್ರಣ ಪತ್ರ ಇರುವುದು.
೧. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ಎಂದರೆ ೨೨ ಜನವರಿಗೆ ಆಯೋಜನ ಸಮಿತಿಯ ಅನುಮತಿ ನೀಡದಿರುವ ಹೊರಗಿನ ಯಾವುದೇ ಜನರಿಗೆ ಮಂದಿರ ಪರಿಸರದಲ್ಲಿ ಪ್ರವೇಶ ನೀಡಲಾಗದು.
೨. ಜನವರಿ ೨೦ ರಿಂದ ಮಂದಿರ ಸಾಮಾನ್ಯ ಭಕ್ತರಿಗಾಗಿ ಮುಚ್ಚಲಾಗುವುದು. ಜನವರಿ ೨೩ ರಿಂದ ಮಂದಿರ ಎಲ್ಲರಿಗಾಗಿ ಮತ್ತೆ ತೆರೆಯಲಾಗುವುದು. ಆ ಸಮಯದಲ್ಲಿ ಭಕ್ತರ ಬಹಳ ಗದ್ದಲಾಗುವುದು. ಇಂತಹ ಪರಿಸ್ಥಿತಿಯಲ್ಲಿ ಅಯೋಧ್ಯೆಯಲ್ಲಿ ಸರಕಾರದಿಂದ ಬಿಗಿ ಸುರಕ್ಷಾ ವ್ಯವಸ್ಥೆ ಮಾಡಲಾಗಿದೆ.
೩. ಜನವರಿ ೨೨ ರಂದು ಹೋಟೆಲ್ ಮತ್ತು ಧರ್ಮಶಾಲೆಗಳಲ್ಲಿ ವಾಸಿಸುವವರಿಂದ ನಿಗದಿತ ಬಾಡಿಗೆಗಿಂತಲೂ ಹೆಚ್ಚಿನ ಶುಲ್ಕ ವಿಧಿಸಿದರೆ ಸಂಬಂಧಿಸಿದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
೪. ಹೋಟೆಲ್ ಮತ್ತು ಧರ್ಮ ಶಾಲೆಗಳಲ್ಲಿ ಎಲ್ಲಾ ಸಿಬ್ಬಂದಿಯರ ಪೊಲೀಸ ಪರಿಶೀಲನೆ ಮಾಡುವ ಸೂಚನೆ ನೀಡಲಾಗಿದೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ