ಲೋಕಸಭೆಯಲ್ಲಿ ಗೊಂದಲ ಸೃಷ್ಟಿಸಿದ 33 ಮಂದಿ, ರಾಜ್ಯಸಭೆಯಲ್ಲಿ 45 ಸಂಸದರು ಅಮಾನತು !

ನವದೆಹಲಿ – ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ 78 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆಯಲ್ಲಿ 33 ಸಂಸದರು ಮತ್ತು ರಾಜ್ಯಸಭೆಯಲ್ಲಿ 45 ಸಂಸದರನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ದ್ರಾವಿಡ ಮುನ್ನೇತ್ರ ಕಲಘಂ (ದ್ರಾವಿಡ್ ಪ್ರಗತಿ ಸಂಘ) ಟಿ.ಆರ್. ಬಾಲು, ದಯಾನಿಧಿ ಮಾರನ್, ತೃಣಮೂಲ ಕಾಂಗ್ರೆಸ್‌ನ ಸೌಗತ್ ರಾಯ್ ಮತ್ತು ಇತರರು ಸೇರಿದ್ದಾರೆ. ಈ ಹಿಂದೆ 14 ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು.

(ಸೌಜನ್ಯ – India today)